Home Mangalorean News Kannada News ಹಿರಿಯ ಕಾಂಗ್ರೆಸ್ಸಿಗ, ಸಹಕಾರಿ ಧುರೀಣ ಕೆಕೆ ಸರಳಾಯ ಆತ್ಮಹತ್ಯೆ

ಹಿರಿಯ ಕಾಂಗ್ರೆಸ್ಸಿಗ, ಸಹಕಾರಿ ಧುರೀಣ ಕೆಕೆ ಸರಳಾಯ ಆತ್ಮಹತ್ಯೆ

Spread the love

ಹಿರಿಯ ಕಾಂಗ್ರೆಸ್ಸಿಗ, ಸಹಕಾರಿ ಧುರೀಣ ಕೆಕೆ ಸರಳಾಯ ಆತ್ಮಹತ್ಯೆ

ಉಡುಪಿ: ಹಿರಿಯ ಕಾಂಗ್ರೆಸ್ಸಿಗ, ಸಹಕಾರಿ ಧುರೀಣ ಕೆಕೆ ಸರಳಾಯ(88) ಅವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಉಡುಪಿ ಪಣಿಯಾಡಿಯಲ್ಲಿ ವರದಿಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಸರಳಾಯರು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಗೆ ನಿಕಟವರ್ತಿಯಾಗಿದ್ದರು ಅಲ್ಲದೆ ಉಡುಪಿ ಜಿಲ್ಲೆಯ ಸಹಕಾರಿ ರಂಗದಲ್ಲಿ ಹೆಸರುವಾಸಿಯಾಗಿದ್ದರು. ಉಡುಪಿಯ ಆಸುಪಾಸಿನಲ್ಲಿ ಪಟಾಕಿ ಸರಳಾಯರೆಂದೇ ಪ್ರಸಿದ್ಧರಾಗಿದ್ದರು

ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೆ.ಕೆ. ಸರಳಾಯರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು ಇದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Spread the love

Exit mobile version