Home Mangalorean News Kannada News ಹಿರಿಯ ಸಾಹಿತಿ ರವಿ ರಾ.ಅಂಚನ್‍ಗೆ ಪಿತೃ ವಿಯೋಗ

ಹಿರಿಯ ಸಾಹಿತಿ ರವಿ ರಾ.ಅಂಚನ್‍ಗೆ ಪಿತೃ ವಿಯೋಗ

Spread the love

ಹಿರಿಯ ಸಾಹಿತಿ ರವಿ ರಾ.ಅಂಚನ್‍ಗೆ ಪಿತೃ ವಿಯೋಗ

ಮುಂಬಯಿ : ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಇರಾನಿ ಚಾಳ್ ಇದರ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ, ಪೋರ್ಟ್ ವೆಸ್ಟರ್ನ್ ಇಂಡಿಯಾ ಶನೀಶ್ವರ ಪೂಜಾ ಸಮಿತಿ ಇದರ ಸ್ಥಾಪಕ ಸದಸ್ಯ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ರಾಮ ಪಿ.ಮಾಬಿಯಾನ್ (93.) ಇಂದಿಲ್ಲಿ ಬುಧವಾರ ಸಂಜೆ ಗೋರೆಗಾಂವ್ ಪಶ್ಚಿಮದ 6ನೇ ತಿಲಕ್ ರಸ್ತೆಯಲ್ಲಿನ ಪ್ರಗತಿ ನಗರ ಎ-15 ಅಪಾರ್ಟ್‍ಮೆಂಟ್‍ನ ಸ್ವನಿವಾಸದಲ್ಲಿ ವೃದ್ಧಾಪ್ಯದಿಂದ ನಿಧನರಾದರು.

ಉಡುಪಿ ಜಿಲ್ಲೆಯ ಕಾಪು ಪಾದೂರು ಮಡಂತೋಟ ನಿವಾಸಿ ಆಗಿದ್ದು ಮುಂಬಯಿ ಸೇರಿ ಬಾಂಬೇ ಪೋರ್ಟ್ ರಾತ್ರಿ ಶಾಲಾ ವಿದ್ಯಾರ್ಥಿ ಆಗಿದ್ದು ರಾಷ್ಟ್ರದ ಪ್ರತಿಷ್ಠಿತ ರ್ಯಾಲೀಸ್ ಇಂಡಿಯಾ ಲಿಮಿಟೆಡ್ ಇದರಲ್ಲಿ ಸುದೀರ್ಘಾವಧಿ ಅಧಿಕಾರಿಗಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ್ದರು. ಮೃತರು ಪತ್ನಿ ಲೀಲಾ ರಾಮ, ನಾಡಿನ ಹಿರಿಯ ಸಾಹಿತಿ ರವಿ ರಾ.ಅಂಚನ್ ಸೇರಿದಂತೆ ಮೂರು ಗಂಡು ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ರಾಮ ಪಿ.ಮಾಬಿಯಾನ್ ನಿಧನಕ್ಕೆ ನಗರದ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ಜು.05) ಬುಧವಾರ ರಾತ್ರಿ ಅಂಧೇರಿ ಪಶ್ಚಿಮದ ಓಶಿವಾರ ಅಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.


Spread the love

Exit mobile version