63ನೇ ರಾಷ್ಟ್ರೀಯ ಸಮುದ್ರ ದಿನಾಚರಣೆ ಮೂಲಕ ಮರ್ಚೆಂಟ್ ನೆವಿ ವಾರವನ್ನು ಸಮಾರೋಪ
ನವ ಮಂಗಳೂರು ಬಂದರು ಪ್ರಾಧಿಕಾರವು 05 ಏಪ್ರಿಲ್ 2026ರಂದು 63ನೇ ರಾಷ್ಟ್ರೀಯ ಸಮುದ್ರ ದಿನಾಚರಣೆಯನ್ನು ಆಚರಿಸುವ ಮೂಲಕ ಮರ್ಚೆಂಟ್ ನೆವಿ ವಾರವನ್ನು ಭವ್ಯವಾಗಿ ಸಮಾರೋಪಗೊಳಿಸಿತು. ಈ ಸಂದರ್ಭದಲ್ಲಿ ಭಾರತದ ಸಮುದ್ರ ಪರಂಪರೆ ಹಾಗೂ ಸಮುದ್ರೋದ್ಯಮದಲ್ಲಿ ತೊಡಗಿರುವ ನಾವಿಕರ ಅಮೂಲ್ಯ ಕೊಡುಗೆಯನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸೀಫೆರರ್ಸ್ ಸ್ಮಾರಕದಲ್ಲಿ ಪುಷ್ಪನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶ್ರೀಮತಿ ಎಸ್. ಶಾಂತಿ, ಉಪಾಧ್ಯಕ್ಷರು, ಎನ್.ಎಂ.ಪಿ.ಎ., ಸಮುದ್ರ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ನಾವಿಕರಿಗೆ ಪುಷ್ಪನಮನ ಸಲ್ಲಿಸಿದರು. ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಬಂದರು ಬಳಕೆದಾರರು ಸಹ ಭಾಗವಹಿಸಿ ಗೌರವ ನಮನ ಸಲ್ಲಿಸಿದರು.
ಸಂಜೆ ಜೆಎನ್ಸಿ ಹಾಲ್, ಎನ್ಎಂಪಿಎ, ಪಣಂಬೂರುನಲ್ಲಿ ಮರ್ಚೆಂಟ್ ನೆವಿ ವಾರದ ಸಮಾರೋಪ ಸಮಾರಂಭ ಭವ್ಯವಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಎಸ್. ಶಾಂತಿ, ಉಪಾಧ್ಯಕ್ಷರು, ಎನ್ಎಂಪಿಎ ವಹಿಸಿದ್ದರು. ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಎಜುಕೇಷನ್ ಫೌಂಡೇಶನ್ (ರಿ.), ಮೂಡಬಿದ್ರೆ, ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಆರ್. ಕೆ. ನಾಯರ್, ಗ್ರೀನ್ ಹೀರೋ ಆಫ್ ಇಂಡಿಯಾ, ಗೌರವ ಅತಿಥಿಯಾಗಿ ಭಾಗವಹಿಸಿದರು. ಜೊತೆಗೆ ಕ್ಯಾಪ್ಟನ್ ಮನೋಜ್ ಜೋಶಿ, ಅಧ್ಯಕ್ಷರು, ಮೆರಿಟೈಮ್ ಡೇ ಸೆಲೆಬ್ರೇಶನ್ ಸಮಿತಿ, ಎನ್ಎಂಪಿಎ, ಹಾಗೂ ಶ್ರೀ ಉಬೈದು ರೆಹಮಾನ್, ಸರ್ವೇಯರ್-ಇನ್-ಚಾರ್ಜ್, ಮರ್ಚೆಂಟೈಲ್ ಮೆರೈನ್ ಡಿಪಾರ್ಟ್ಮೆಂಟ್, ಮಂಗಳೂರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಡಾ. ಎಂ. ಮೋಹನ್ ಆಳ್ವ ಅವರು ನಾವಿಕರ ಸೇವೆ ಹಾಗೂ ಸಮುದ್ರೋದ್ಯಮದ ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಇರುವ ಮಹತ್ವದ ಪಾತ್ರವನ್ನು ಉಲ್ಲೇಖಿಸಿ, ಅವರ ಸೇವೆಯನ್ನು ಗುರುತಿಸುವ ಅಗತ್ಯವನ್ನು ಒತ್ತಿಹೇಳಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮತಿ ಎಸ್. ಶಾಂತಿ ಅವರು ಮರ್ಚೆಂಟ್ ನೆವಿ ವಾರದಲ್ಲಿ ಬಂದರು ಬಳಕೆದಾರರು, ಹಿತಾಸಕ್ತರು ಹಾಗೂ ಸಿಬ್ಬಂದಿ ನೀಡಿದ ಸಹಕಾರವನ್ನು ಪ್ರಶಂಸಿಸಿ, ಸಮುದ್ರೋದ್ಯಮದ ಅಭಿವೃದ್ಧಿಗೆ ಸಹಕಾರಾತ್ಮಕ ಕಾರ್ಯಪದ್ಧತಿಯ ಅಗತ್ಯವನ್ನು ತಿಳಿಸಿದರು.
ಡಾ. ಆರ್. ಕೆ. ನಾಯರ್ ಅವರು ಪರಿಸರ ಸಂರಕ್ಷಣೆ ಹಾಗೂ ಶಾಶ್ವತ ಸಮುದ್ರ ಕಾರ್ಯಾಚರಣೆಗಳ ಮಹತ್ವವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಮರ್ಚೆಂಟ್ ನೆವಿ ವಾರ ವರದಿ ಮಂಡನೆ, ಗಣ್ಯರ ಸನ್ಮಾನ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಲಾಯಿತು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.
ಹಿನ್ನೆಲೆ – ಮರ್ಚೆಂಟ್ ನೆವಿ ವಾರ ಆಚರಣೆ
ಎನ್ಎಂಪಿಎ 28 ಮಾರ್ಚ್ ರಿಂದ 05 ಏಪ್ರಿಲ್ 2026ರವರೆಗೆ ಮರ್ಚೆಂಟ್ ನೆವಿ ವಾರವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಿತು.
28.03.2026 ರಂದು ಮೆರಿಟೈಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಯಿತು.
29.03.2026 ರಂದು ಟ್ರೆಷರ್ ಹಂಟ್ ಕಾರ್ಯಕ್ರಮ ನಡೆಯಿತು.
30.03.2026 ರಂದು ಪಣಂಬೂರು ಕಡಲತೀರದಲ್ಲಿ ಕಡಲತೀರ ಸ್ವಚ್ಛತಾ ಅಭಿಯಾನ ಹಾಗೂ ಟಗ್ ಆಫ್ ವಾರ ಸ್ಪರ್ಧೆ ನಡೆಯಿತು.
31.03.2026 ರಂದು ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಈ ಶಿಬಿರದಲ್ಲಿ 123 ಮಂದಿ ದಾನಿಗಳು ಭಾಗವಹಿಸಿದರು.
01.04.2026 ರಂದು “Maritime Adversities and Role of Stakeholders” ಹಾಗೂ “Indian Port Act 2025” ವಿಷಯಗಳ ಕುರಿತು ಮೆರಿಟೈಮ್ ಸೆಮಿನಾರ್ ಆಯೋಜಿಸಲಾಯಿತು.
02.04.2026 ರಂದು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ಹಾಗೂ ಮಹಿಳಾ ಸಿಬ್ಬಂದಿಗಾಗಿ ತ್ರೋಬಾಲ್ ಸ್ಪರ್ಧೆ ನಡೆಯಿತು. ಇದೇ ದಿನ ಆಕಾಶವಾಣಿ ಮೂಲಕ ರೇಡಿಯೋ ಸಂವಾದವೂ ನಡೆಯಿತು.
03.04.2026 ರಂದು ಗೌರವಾನ್ವಿತ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮರ್ಚೆಂಟ್ ನೆವಿ ಲ್ಯಾಪೆಲ್ ಅಳವಡಿಸಲಾಯಿತು.
04.04.2026 ರಂದು ಮೆರಿಟೈಮ್ ಮ್ಯಾರಥಾನ್ ಆಯೋಜಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ 05 ಏಪ್ರಿಲ್ 2026 ರಂದು 63ನೇ ರಾಷ್ಟ್ರೀಯ ಸಮುದ್ರ ದಿನಾಚರಣೆ ಆಚರಿಸಿ ಮರ್ಚೆಂಟ್ ನೆವಿ ವಾರವನ್ನು ಯಶಸ್ವಿಯಾಗಿ ಸಮಾರೋಪಗೊಳಿಸಲಾಯಿತು.
ಈ ವಾರದ ಆಚರಣೆಗಳು ನಾವಿಕರ ಸಮರ್ಪಣೆ, ಶ್ರಮ ಹಾಗೂ ಸಮುದ್ರೋದ್ಯಮದ ಮಹತ್ವವನ್ನು ಪುನರುಚ್ಚರಿಸುವುದರ ಜೊತೆಗೆ ಜಾಗತಿಕ ವ್ಯಾಪಾರದಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಗೌರವಿಸುವಂತಾಯಿತು.