ಬೆಳ್ತಂಗಡಿ: ಜೂ. 14 ರಿಂದ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ
ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲು ಚಾರಣಕ್ಕೆ ಜೂ. 14 ರಿಂದ ಪ್ರವೇಶ ನಿರ್ಬಂಧಿಸಲಾಗಿದೆ.
ಮಳೆಯಿಂದ ಕಲ್ಲುಗಳು ಜಾರುವ ಹಿನ್ನಲೆ, ಚಾರಣ ಅಪಾಯಕಾರಿಯಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಚಾರಣಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಮಾಹಿತಿ ನೀಡಿದ್ದಾರೆ.
ಚಿತ್ರಕಲೆ ಎಂದರೆ ಕಲೆಗಳನ್ನು ರಚಿಸಲು ಬ್ರಷ್ಗಳನ್ನು ಬಳಸಿ ಬಣ್ಣಗಳನ್ನು ಸ್ಮಾಶ್ ಮಾಡುವ ಕಲೆ. ಕಾಗದ, ಜೇಡಿಮಣ್ಣು, ಮರಳು, ಮತ್ತು ಇನ್ನೂ ಅನೇಕ ರೀತಿಯ ಚಿತ್ರಕಲೆ ಸಾಮಗ್ರಿಗಳಿವೆ. ಚಿತ್ರಕಲೆಯ ಸಾಮಾನ್ಯ ವಿಧಗಳು ಇಲ್ಲಿವೆ. ಜೂ. 1 ರಿಂದ ಚಾರಣಕ್ಕೆ ಅವಕಾಶ ನೀಡಿದ ಹಿನ್ನಲೆ, ನೂರಾರು ಮಂದಿ ಗಡಾಯಿಕಲ್ಲು ಚಾರಣ ನಡೆಸಿದ್ದರು. ಭಾನುವಾರ ಹೆಚ್ಚಿನವರು ಚಾರಣಕ್ಕೆ ತೆರಳಿದ್ದರು.
ಇದೀಗ ಮತ್ತೆ ನಿರ್ಬಂಧ ಹೇರಿದ ಕಾರಣ ಚಾರಣಿಗರಿಗೆ ಭಾರೀ ನಿರಾಸೆಯಾಗಿದೆ. ಮಳೆ ಕಡಿಮೆಯಾದ ಬಳಿಕ ಮತ್ತೆ ಚಾರಣಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
