Home Mangalorean News Kannada News ಸಿಟಿ ಗೇಟ್ ವೇ ಅಪಾರ್ಟ್‌ಮೆಂಟ್ʼ ಸಂಘದ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಸಿಟಿ ಗೇಟ್ ವೇ ಅಪಾರ್ಟ್‌ಮೆಂಟ್ʼ ಸಂಘದ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

Spread the love

ಸಿಟಿ ಗೇಟ್ ವೇ ಅಪಾರ್ಟ್‌ಮೆಂಟ್ʼ ಸಂಘದ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಉಡುಪಿ: ನಗರದ ಮಿಷನ್ ಕಂಪೌಂಡ್ ಬಳಿಯ ಸಿಟಿ ಗೇಟ್ ವೇ ಅಪಾರ್ಟ್‌ಮೆಂಟ್ ಕಟ್ಟಡ ಸಂಕೀರ್ಣ ಸಂಘದ ಮಹಾಸಭೆಯು ಇತ್ತೀಚೆಗೆ ಕಟ್ಟಡದ ಸಭಾಗೃಹದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಕ್ಬಾಲ್ ಹಮ್ಮಾಜಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಮೀಳಾ ಜತ್ತನ್ನ ಸಭೆಯ ವರದಿ ಮಂಡಿಸಿದರು. ಸಂಘದ ಖಜಾಂಚಿ ರೇಷ್ಮಾ ತೋಟ ಆಯವ್ಯಯಗಳ ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ 2026-27ನೇ ಸಾಲೀನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ ಹಮ್ಮಾಜಿ, ಕಾರ್ಯದರ್ಶಿಯಾಗಿ ಪ್ರಮೀಳಾ ಜತ್ತನ್ನ ಹಾಗೂ ಖಜಾಂಚಿಯಾಗಿ ರೇಷ್ಮಾ ತೋಟ ಆಯ್ಕೆಯಾದರು. ಸದಸ್ಯರಾಗಿ ಸ್ಟ್ಯಾಂಲಿ ಮಾರ್ಟೀಸ್, ಅಭಿಷೇಕ್ ಶ್ರೀವಾಸ್ತವ್, ಮುಹಮ್ಮದ್ ಸಿ.ಎ., ಶಾಲಿನಿ ಅಮ್ಮನ್ನ, ಸಂಚಿತಾ ಮೇಸ್ತ, ವಿಜಯ್ ಜತ್ತನ್ನ ಆಯ್ಕೆಯಾದರು.


Spread the love

Exit mobile version