ಫೆ.28- ಮಾ.2: ಚಿತ್ರಕಲೆ ಮತ್ತು ಛಾಯಾಚಿತ್ರಗಳ ಸಂಯುಕ್ತ ಪ್ರದರ್ಶನ ‘ಪಯಣ’ ಆಯೋಜನೆ
ಉಡುಪಿ: ಉಡುಪಿಯ ಆರ್ಟಿಸ್ಟ್ಸ್’ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ “ಪಯಣ”ವನ್ನು ಫೆಬ್ರವರಿ 28ರಿಂದ ಮಾರ್ಚ್ 2, 2026ರವರೆಗೆ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಠಿಯಲ್ಲಿ ಆಯೋಜಿಸಲಾಗಿದೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10:00 ರಿಂದ ಸಂಜೆ 7:00ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಕೆ. ರಂಜನ್, (ಅಧ್ಯಕ್ಷರು, ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್), ಹರಿಪ್ರಸಾದ್ ರೈ, (ಅಧ್ಯಕ್ಷರು, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್), ಡಾ. ಎಸ್. ಎಂ. ಶಿವಪ್ರಕಾಶ್, (ಮಾಜಿ ಡೀನ್, ಫಿಶರೀಸ್ ಕಾಲೇಜು, ಮಂಗಳೂರು)ಹಾಜರಾಗಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಟಿಸ್ಟ್ಸ್’ ಫೋರಂ ಅಧ್ಯಕ್ಷ ರಮೇಶ್ ರಾವ್ ವಹಿಸಲಿದ್ದಾರೆ.
ಈ ಪ್ರದರ್ಶನದಲ್ಲಿ ರಮೇಶ್ ರಾವ್,ಸಕು ಪಾಂಗಾಳ , ಲಿಯಾಕತ್ ಅಲಿ, ಕುರ್ಶಿದ್ ಯಾಕುಬ್, ಸೀತಾರಾ ರಾವ್, ಜನಾರ್ದನ ಹಾವಂಜೆ, ಜೀವನ್ ಶೆಟ್ಟಿ, ಪ್ರಸಾದ್ ರಾವ್ ಜಿ, ಮಂಜುನಾಥ ಮಯ್ಯ, ರೇಶ್ಮಾ ಶೆಟ್ಟಿ, ಶ್ರೀನಾಥ ಮಣಿಪಾಲ, ಸಪ್ನಾ ನರೋಹ್ನಾ, ಗಣೇಶ್ ಕುಕ್ಕೆಹಳ್ಳಿ, ಮೋನಪ್ಪ ಎಚ್.ಎಸ್., ಥಾಮಸ್ ಎಂ.ಜೆ., ಪವನ್ ಕುಮಾರ್ ಅತ್ತಾವರ, ಸ್ನೇಹಾ ಸುಬ್ರಹ್ಮಣ್ಯ, ಎಚ್.ಕೆ. ರಾಮಚಂದ್ರ, ಡಾ. ಕಿರಣ್ ಆಚಾರ್ಯ, ಸಂತೋಷ್ ಪೈ, ಅಭಿಷೇಕ್ ತಲ್ವಾಲ್ಕರ್, ಜಯವಂತ್, ಸತೀಶ್ಚಂದ್ರ, ರವಿ ಹಿರೆಬೆಟ್ಟು, ವಸಂತ ಹೆಬ್ರಿ, ಆಸ್ಟ್ರೋ ಮೋಹನ್, ಪ್ರವೀಣಾ ಮೋಹನ್ ಸೇರಿದಂತೆ ಹಲವು ಕಲಾವಿದರ ಕೃತಿಗಳು ಪ್ರದರ್ಶಿಸಲ್ಪಡಲಿವೆ.
1992ರಲ್ಲಿ ಸ್ಥಾಪಿತವಾದ ಆರ್ಟಿಸ್ಟ್ಸ್’ ಫೋರಂ, ಉಡುಪಿ ಹಾಗೂ ಕರಾವಳಿ ಕರ್ನಾಟಕದಲ್ಲಿ ಕಲಾತ್ಮಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಾ ದೃಶ್ಯಕಲೆಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. “ಪಯಣ” ಪ್ರದರ್ಶನವು ಸದಸ್ಯರ ಸೃಜನಾತ್ಮಕ ಪಯಣವನ್ನು ಪ್ರತಿಬಿಂಬಿಸುವುದರೊಂದಿಗೆ ಕಲಾಪ್ರೇಮಿಗಳಿಗೆ ವೈವಿಧ್ಯಮಯ ಕಲಾರೂಪಗಳನ್ನು ಅನುಭವಿಸುವ ಅವಕಾಶ ಒದಗಿಸುತ್ತದೆ.
ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರದರ್ಶನಕ್ಕೆ ಭೇಟಿ ನೀಡಿ ಪ್ರಯೋಜನ ಪಡೆಯುವಂತೆ ಸಂಘಟಕರು ಕೋರಿದ್ದಾರೆ.