Home Mangalorean News Kannada News ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅಯ್ಕೆ 

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅಯ್ಕೆ 

Spread the love

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ರಂಗಸಾರಥಿ ಶ್ರೀವಿಶ್ವನಾಥ್ ಶೆಟ್ಟಿ ಅಯ್ಕೆ 

ಯುಎಇ ನಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಪರಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ.

 

ಈ ಸಂಸ್ಥೆಯ 2026-28 ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇನಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ಶ್ರೀ ವಿಶ್ವನಾಥ್ ಶೆಟ್ಟಿ ಸಹನೂಮತದಿಂದ ಆಯ್ಕೆ ಮಾಡಲಾಗಿದೆ.

ಅಂತೇಯೇ ಉಪಾಧ್ಯಕ್ಷರಾಗಿ ಶ್ರೀಅಜ್ಮಲ್ ಸಯ್ಯದ್ ಆಯ್ಕೆಯಾಗಿ ಪ್ರಧಾನ ಕಾರ್ಯದರ್ಶಿ ಶ್ರೀ ವಿಘ್ನೇಶ್ ಕುಂದಾಪುರ ಮತ್ತು ಕೋಶಾಧೀಕಾರಿಯಾಗಿ ಶ್ರೀಸುಂಗಧರಾಜ್ ಬೇಕಲ್ ಮರು ಆಯ್ಕೆಯಾಗಿದ್ದಾರೆ.

ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ರಘುರಾಮ್ ಶೆಟ್ಟಿಗಾರ್ ಅಂತೇಯೇ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೀತೇಶ್ ಅಂಚನ್ ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್ ಶ್ರಿ ಪೂಜಾರಿ , ಕ್ರೀಡಾ ಕಾರ್ಯದರ್ಶಿಯಾಗಿ ಅಮರ್ ಉಮೇಶ್ ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಮತ್ತು ಅಬ್ರಹಾರ್ ಅಹ್ಮದ್ ಅವರನ್ನು ಆಯ್ಕೆಮಾಡಲಾಯಿತು.

ಅಂತೇಯೆ ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಶ್ರೀಪ್ರವೀಣ್ ಶೆಟ್ಟಿ , ಶ್ರೀ ಹರೀಶ್ ಶೇರಿಗಾರ್ , ಜೋಸೆಫ್ ಮಥಾಯಿಸ್ , ರಾಮಚಂದ್ರ ಹೆಗ್ಡೆ ಮುಂದುವರಿಯಲಿದ್ದಾರೆ.
ಸಂಘದ ಸಲಹೆಗಾರರಾಗಿ ಶ್ರೀ ಎಂ.ಇ.ಮೂಳುರು , ಶ್ರೀಗಣೇಶ್ ರೈ , ಶ್ರೀಸತೀಶ್ ಪೂಜಾರಿ ಮತ್ತು ಶ್ರೀನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.


Spread the love

Exit mobile version