Home Mangalorean News Kannada News ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಉಚ್ಚಿಲ ಅವಿರೋಧ ಆಯ್ಕೆ

ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಉಚ್ಚಿಲ ಅವಿರೋಧ ಆಯ್ಕೆ

Spread the love

ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಉಚ್ಚಿಲ ಅವಿರೋಧ ಆಯ್ಕೆ

ಕಾಪು: ಇಲ್ಲಿಯ ಪ್ರತಿಷ್ಠಿತ ಕಾಪು ಪ್ರೆಸ್ ಕ್ಲಬ್‍ನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಮಂಗಳವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ, ಆಯ್ಕೆ ಪ್ರಕ್ರಿಯೆ ನಡೆದಿದ್ದು, ನಿರ್ಗಮನ ಅಧ್ಯಕ್ಷ ರಾಮಚಂದ್ರ ಆಚಾರ್ಯರವರು ಚುನಾವಣಾಧಿಕಾರಿಯಾಗಿದ್ದರು.
ಬಾಲಕೃಷ್ಣ ಪೂಜಾರಿಯವರು ಪ್ರಸ್ತುತ ಮುಂಬೈಯ ಪ್ರಚಲಿತ ಕರ್ನಾಟಕ ಮಲ್ಲ, ಪತ್ರಿಕೆಯಲ್ಲಿ, ಉಡುಪಿ- ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಟಿವಿ ಹಾಗೂ ಪ್ರೈಂ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಉಳಿದಂತೆ ಗೌರವಾಧ್ಯಕ್ಷರಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಯಕರ ಸುವರ್ಣ ಸುವರ್ಣ, ಉಪಾಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಪುಂಡಲೀಕ ಮರಾಠೆ, ಕಾರ್ಯದರ್ಶಿಯಾಗಿ ಕರಾವಳಿ ಅಲೆ ಪತ್ರಿಕೆಯ ಸುರೇಶ್ ಎರ್ಮಾಳು, ಜೊತೆ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವಿಜಯ್ ಆಚಾರ್ಯ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ಹರೀಶ್ ಕಟಪಾಡಿ, ಕೋಶಾಧಿಕಾರಿಯಾಗಿ ಸ್ಪಂದನ ವಾಹಿನಿಯ ಪ್ರಮೋದ್ ಸುವರ್ಣ, ಕಾನೂನು ಸಲಹೆಗಾರರಾಗಿ ಅಶೀದುಲ್ಲ ಕಟಪಾಡಿ ಅವಿರೋಧ ಆಯ್ಕೆ ಆಗಿದ್ದಾರೆ.

ಸಮಿತಿ ಸದಸ್ಯರಾಗಿ ವಿಜಯ ಕರ್ನಾಟಕ ಪತ್ರಿಕೆಯ ವಾದಿರಾಜ್ ರಾವ್ ನಡಿಮನೆ, ಪ್ರಜಾವಾಣಿಯ ಪ್ರಕಾಶ್ ಸುವರ್ಣ ಕಟಪಾಡಿ, ಸ್ಪಂದನ ವಾಹಿನಿಯ ಸಂತೋಷ್ ನಾಯ್ಕ್ ಮತ್ತು ಕರುಣಾಕರ್ ನಾಯಕ್, ಹೊಸದಿಗಂತ ಪತ್ರಿಕೆಯ ಅನಿಲ್ ಆಳ್ವಾ ಮೂಡುಬೆಳ್ಳೆ ಆಯ್ಕೆ ಆಗಿದ್ದಾರೆ.

ಮಾ. 28ರಂದು ಪದಗ್ರಹಣ ಸಮಾರಂಭ ನಡೆಯಲಿದೆ. ನಿರ್ಗಮನ ಕಾರ್ಯದರ್ಶಿ ರಾಕೇಶ್ ಕುಂಜೂರು ವಂದಿಸಿ ಸ್ವಾಗತಿಸಿದರು.


Spread the love

Exit mobile version