Home Mangalorean News Kannada News ಜುಲೈ 4 ರ ಮಧ್ಯರಾತ್ರಿಯಿಂದ ದಕ ಜಿಲ್ಲೆ ಲಾಕ್ ಡೌನ್ – ಸತ್ಯಕ್ಕೆ ದೂರವಾದ ಸಂಗತಿ...

ಜುಲೈ 4 ರ ಮಧ್ಯರಾತ್ರಿಯಿಂದ ದಕ ಜಿಲ್ಲೆ ಲಾಕ್ ಡೌನ್ – ಸತ್ಯಕ್ಕೆ ದೂರವಾದ ಸಂಗತಿ ಜಿಲ್ಲಾಡಳಿತ ಸ್ಪಷ್ಟನೆ

Spread the love

ಜುಲೈ 4 ರ ಮಧ್ಯರಾತ್ರಿಯಿಂದ ದಕ ಜಿಲ್ಲೆ ಲಾಕ್ ಡೌನ್ – ಸತ್ಯಕ್ಕೆ ದೂರವಾದ ಸಂಗತಿ ಜಿಲ್ಲಾಡಳಿತ ಸ್ಪಷ್ಟನೆ

ಮಂಗಳೂರು: ಜುಲೈ 4 ರ ಮಧ್ಯರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟ ಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜುಲೈ 4 ರ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ಕೂಡಲೇ ಮಧ್ಯರಾತ್ರಿಯಿಂದ ಜಿಲ್ಲೆಯ ಎಲ್ಲಾ ಗಡಿಗಳನ್ನು ಸಂಪೂರ್ಣ ಮುಚ್ಚಲಾಗುವುದು. ಆದ್ದರಿಂದ ಜಿಲ್ಲೆಗೆ ಆಗಮಿಸುವವರು ಅಥವಾ ಹೊರಹೋಗುವವರು ಈ ಕುರಿತು ಎಚ್ಚರಿಕೆ ವಹಿಸವಂತೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ಇದೊಂದು ಗಾಳಿ ಸುದ್ದಿಯಾಗಿದ್ದು ಅಂತಹ ಯಾವುದೇ ರೀತಿಯ ನಿರ್ಧಾರವನ್ನು ಜಿಲ್ಲಾಡಳಿತ ಈ ವರೆಗೆ ಕೈಗೊಂಡಿಲ್ಲ ಎಂದು ಹೇಳಿದೆ.


Spread the love

Exit mobile version