Home Mangalorean News Kannada News ಪ್ರವಾಹಕ್ಕೆ ಸಿಲುಕಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಟುಂಬ ಸದಸ್ಯರ ರಕ್ಷಣೆ

ಪ್ರವಾಹಕ್ಕೆ ಸಿಲುಕಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಟುಂಬ ಸದಸ್ಯರ ರಕ್ಷಣೆ

Spread the love

ಪ್ರವಾಹಕ್ಕೆ ಸಿಲುಕಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಟುಂಬ ಸದಸ್ಯರ ರಕ್ಷಣೆ

ಬಂಟ್ವಾಳ: ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತವಾಗಿದೆ.

ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರ ಮನೆ ಜಲಾವೃತವಾಗಿದ್ದು, ರಕ್ಷಣಾ ಪಡೆಯ ಸಹಾಯದಿಂದ ಪೂಜಾರಿ ಮತ್ತವರ ಕುಟುಂಬ ಸದಸ್ಯರನ್ನು ಸ್ಥಳಾಂತರಿಸಲಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಬಂಟ್ವಾಳ ಪೇಟೆ, ಪಾಣೆಮಂಗಳೂರು ಪೇಟೆಯ ಅಂಗಡಿ ಮುಂಗಟ್ಟುಗಳು ಸೇರಿದಂತೆ ಮನೆಗಳು ಜಲಾವೃತಗೊಂಡಿದೆ.

ತಾಲೂಕಿನಲ್ಲಿ ಹೆಚ್ಚಿನ ಸಂಪರ್ಕ ರಸ್ತೆಗಳಿಗೆ ನೀರು ನುಗ್ಗಿದ್ದು, ಜಕ್ರಿಬೆಟ್ಟು ಭಾಗ ಜಲಾವೃತಗೊಂಡ ಹಿನ್ನೆಲೆಯಲ್ಲಿ ಪ್ರಮುಖವಾಗಿ ಧರ್ಮಸ್ಥಳ-ಮಂಗಳೂರು ಬಸ್ ಸಂಚಾರ ಬಂದ್ ಆಗಿದೆ.


Spread the love

Exit mobile version