Home Mangalorean News Kannada News ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

Spread the love

ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

ಉಡುಪಿ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣರೈಲು ಮಾರ್ಗದ ಮೇಲೆ ಮಣ್ಣು ಜರಿದು ಬಿದ್ದಿದ್ದು ಹಲವು ರೈಲುಗಳನ್ನು ರದ್ದುಪಡಿಸಲಾ ಗಿದೆ. ಮುಂಬಯಿ ಪ್ರದೇಶದಲ್ಲಿ 24 ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಂಗಳೂರು-ಕುರ್ಲಾ ಮತ್ಸ್ಯಗಂಧ ರೈಲನ್ನು(12620) ಕುಂದಾಪುರದಿಂದ ಮಂಗಳೂರಿಗೆ ವಾಪಸ್ ಕಳುಹಿಸಲಾಯಿತು. ಕುರ್ಲಾದಿಂದ ಬರುವ ಮತ್ಸ್ಯಗಂಧ ರೈಲನ್ನೂ (12619) ರದ್ದುಪಡಿಸಲಾಗಿದೆ. ಮಂಗಳೂರು ಜಂಕ್ಷನ್ನಿಂದ ಮುಂಬಯಿ ಸಿಎಸ್ಎಂಟಿಗೆ ಹೋಗಬೇಕಾದ (12134) ರೈಲು, ಸಿಎಸ್ಎಂಟಿಯಿಂದ ಬರಬೇಕಾದ ರೈಲು (12133) ಗಳನ್ನೂ ರದ್ದುಪಡಿಸಲಾ ಗಿದೆ. ಎರ್ನಾಕುಳಂ-ಕುರ್ಲಾ ತುರಂತೋ ಎಕ್ಸ್ಪ್ರೆಸ್ಸನ್ನು ರದ್ದುಪಡಿಸಲಾಗಿದೆ. ಆ. 5ರ ಕೊಚ್ಚುವೇಲಿ- ಕುರ್ಲಾ (22124) ರೈಲನ್ನೂ ರದ್ದುಪಡಿಸಲಾಗಿದೆ.

ರವಿವಾರದ ಎರ್ನಾಕುಳಂ-ಪುಣೆ ರೈಲನ್ನು (22150) ರದ್ದುಪಡಿಸಲಾಗಿದೆ. ತಿರುವನಂತಪುರ – ಕುರ್ಲಾ (16346) ರೈಲನ್ನು ಶೋರ್ನೂರಿನಿಂದ ರದ್ದುಪಡಿಸಲಾಗಿದೆ. ಕುರ್ಲಾದಿಂದ ತಿರುವನಂತಪುರಕ್ಕೆ ಹೋಗುವ (16345) ನೇತ್ರಾವತಿ ಎಕ್ಸ್ಪ್ರೆಸ್ ಕೂಡ ರದ್ದಾಗಿದೆ. ಕೊಚ್ಚುವೇಲಿಯಿಂದ ಕುರ್ಲಾಕ್ಕೆ ಹೋಗುವ ರೈಲನ್ನು (12202) ಕಣ್ಣೂರಿನಲ್ಲಿ ರದ್ದುಪಡಿಸಲಾಯಿತು ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ


Spread the love

Exit mobile version