Home Mangalorean News Kannada News ಶಿವರಾಜ್ ಕೊಲೆಗೆ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಶಿವರಾಜ್ ಕೊಲೆಗೆ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

ಶಿವರಾಜ್ ಕೊಲೆಗೆ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ಜನವರಿ 22 ರಂದು ಬೆಂಗ್ರೆ ಗ್ರಾಮದ ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಕೊಲೆಯಾದ ಶಿವರಾಜ್ ಕರ್ಕೇರ ಈತನ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಟ್ಟು 10 ಜನರು ದಸ್ತಗಿರಿಯಾಗಿದ್ದು, ಕೊಲೆಗೆ ದುಷ್ಪ್ರೇರಣೆ ಹಾಗೂ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶನಿವಾರ  ಖಚಿತ ಮಾಹಿತಿಯಂತೆ ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳ ತಂಡ ಮಂಗಳೂರು ನಗರ ಭಾಗದಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.

ಬಂಧಿತನನ್ನು ಸುರತ್ಕಲ್ ಸದಾಶಿವನಗರ ನಿವಾಸಿ ಮನೋಜ್ ಯಾನೆ ಗುಡ್ಡೆಕೊಪ್ಪಳ ಮನೋಜ್ ಯಾನೆ ಮನು (39) ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಹಾಗೂ ಮಂಗಳೂರು ಉತ್ತರ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love

Exit mobile version