ಅಮೃತಧಾರ ಗೋಶಾಲೆಯಲ್ಲಿ ಗೋ ಕಳ್ಳತನ :ಮೂವರ ಬಂಧನ

Spread the love

ಅಮೃತಧಾರ ಗೋಶಾಲೆಯಲ್ಲಿ ಗೋ ಕಳ್ಳತನ :ಮೂವರ ಬಂಧನ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ  ಬಂಟ್ವಾಳ  ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ   ಕೊಣಾಜೆ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಎಂ ಜೆಎಮ್ ಕಸಾಬಾ ಬೆಂಗ್ರೆ ನಿವಸಿ ಅಹ್ಮದ್ ಕಬೀರ್, ಮಂಜೇಶ್ವರ ಪೈವಳಿಕೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ,

 ಆರೋಪಿಗಳ  ವಶದಿಂದ ಕೃತ್ಯಕ್ಕೆ ಬಳಸಿದ ಕೆಎ.01ಎಂ.ಬಿ.1253 ನೇ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು ಈ ಆರೋಪಿಗಳು ಈ ಮೊದಲು ಉಳ್ಳಾಲ, ಕಂಕನಾಡಿ, , ವಿಟ್ಲ ಕೊಣಾಜೆ ಠಾಣಾ ಸರಹದ್ದಿನಲ್ಲಿ ಇದೇ ರೀತಿ ಹಟ್ಟಿಯಿಂದ ದನಗಳನ್ನು ಕದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಯವರಾದ ರಾಮ ರಾವ್‌‌ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಯಾದ  ಕೊಣಾಜೆ ಪೊಲೀಸ್ ನಿರೀಕ್ಷಕ  ಪ್ರಕಾಶ್‌‌ ಬಿ.ಎಸ್‌, ಪಿ.ಎಸ್.ಐ ರವಿ ಪೀರು ಪವಾರ್, ಪಿಎಸ್ಐ ಶಂಕರ್ ನಾಯರಿ ಮತ್ತು  ಸಿಬ್ಬಂದಿಯವರು ಹಾಗೂ  ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


Spread the love