Spread the love
ತೌಸೀಫ್ ಅಹ್ಮದ್ ಗೆ ‘ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ
ಮಂಗಳೂರು: ಖ್ಯಾತ ಪ್ರಾಣಿ ರಕ್ಷಕರಾದ ತೌಸೀಫ್ ಅಹ್ಮದ್ ಅವರನ್ನು ಬೆಂಗಳೂರಿನ ‘ಸ್ವರ್ಣ ಭಾರತ ಫೌಂಡೇಶನ್’ ಸಂಸ್ಥೆಯು ಅಸಾಧಾರಣ ಪ್ರಾಣಿ ರಕ್ಷಣೆ ಮತ್ತು ಕಲ್ಯಾಣ ಸೇವಾ ಪ್ರಶಸ್ತಿ 2026 ಎಂಬ ‘ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಯೊಂದಿಗೆ ಗೌರವಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.
ಪ್ರಾಣಿ ಕಲ್ಯಾಣಕ್ಕಾಗಿ ಅವರು ತೋರಿದ ಬದ್ಧತೆಗೆ ಸಂದ ಮೂರನೇ ರಾಷ್ಟ್ರೀಯ ಮನ್ನಣೆ ಇದಾಗಿದೆ.
ಕಳೆದ 15 ವರ್ಷಗಳಲ್ಲಿ ತೌಸೀಫ್ ಅವರು ಮಂಗಳೂರು ಮತ್ತು ಅದರ ಸುತ್ತಮುತ್ತಲಿನ ಬೀದಿಗಳಿಂದ 26,000ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿ ಅವುಗಳಿಗೆ ಮರುಜೀವ ನೀಡಿದ್ದಾರೆ, ಅವರ ಈ ಅವಿರತ ಮಾನವೀಯ ಸೇವೆಗೆ ವ್ಯಾಪಕ ಮನ್ನಣೆ ದೊರೆತಿದೆ.
Spread the love













