ಸುರತ್ಕಲ್ : ಭಜನಾ ಮಂದಿರಕ್ಕೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

Spread the love

ಸುರತ್ಕಲ್ : ಕೆಲವು ಕಿಡಿಗೇಡಿಗಳು ಸುರತ್ಕಲ್ ಸಮೀಪದ ಕೃಷ್ಣಾಪುರದ ರಾಮ ಭಜನಾ ಮಂದಿರಕ್ಕೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ನಡೆದಿದೆ.

temple-stone (3) temple-stone (1)

ಮಾಹಿತಿಗಳ ಪ್ರಕಾರ ಇತ್ತೀಚೆಗಷ್ಟೇ ಸುಮಾರು 25000 ಹಣವನ್ನು ವ್ಯಯಿಸಿ ಹೊಸ ಗ್ಲಾಸುಗಳನ್ನು ಭಜನಾ ಮಂದಿರದ ಕಿಟಕಿಗಳಿಗೆ ಅಳವಡಿಸಲಾಗಿದ್ದು, ಜೂನ್ 2 ರ ಬೆಳಿಗ್ಗೆ ಸುಮಾರು 1.30 ಹೊತ್ತಿಗೆ ಗಾಜುಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು, ಬೆಳಿಗ್ಗೆ ಭಜನಾ ಮಂದಿರದ ವ್ಯಕ್ತಿಗಳು ಸ್ಥಳಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿದೆ


Spread the love