ಡೋಝರ್ ಯಂತ್ರ ಡಿಕ್ಕಿ : ಕಾರ್ಮಿಕನ ಸಾವು

Spread the love

ಡೋಝರ್ ಯಂತ್ರ ಡಿಕ್ಕಿ : ಕಾರ್ಮಿಕನ ಸಾವು

ಮೂಡಬಿದರೆ: ನೆಲ್ಲಿಕಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಬೋರುಗುಡ್ಡೆಯ ರೋಬೊ ಸಿಲಿಕಾನ್ ಜಲ್ಲಿಕ್ರಷರ್ ನಲ್ಲಿ ಡೋಝರ್ ಯಂತ್ರವೊಂದು ಡಿಕ್ಕಿ ಹೊಡೆದು ಕಾರ್ಮಿಕ ಸಾವನಪ್ಪಿದ ಘಟನೆ ಬುಧವಾರ ನಡೆದಿದೆ.

ಮೃತ ಕಾರ್ಮಿಕನನ್ನು ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ನಂದಪ್ಪ ಗೌಡ ಎಂಬವರ ಪುತ್ರ ಸುಜಿತ್ ಕುಮಾರ್ (22) ಎಂದು ಗುರುತಿಸಲಾಗಿದೆ.

ಸುಜಿತ್ ರೋಬೊ ಸಿಲಿಕಾನ್ ಜಲ್ಲಿಕ್ರಷರಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಜಲ್ಲಿ ಕೃಷರ್ ಆವರಣದಲ್ಲಿ ಡೋಝರ್ ಯಂತ್ರದ ಮೂಲಕ ಜಲ್ಲಿಯನ್ನು ಸಾಗಾಟ ಮಾಡುವಾಗ ಡೋಜರ್‌ ಮೆಷಿನ್ ಹಿಂದಕ್ಕೆ ಹೋದಾಗ ಡೋಜರ್‌ ಅಪರೇಟರ್‌ ಮಹಮ್ಮದ್‌ ಮಿರಾಜ್‌ ನು ಹಿಂಬದಿಯನ್ನು ಗಮನಿಸದೇ ನಿರ್ಲಕ್ಷ ತನದಿಂದ ಒಮ್ಮೆಲೆ ಡೋಜರನ್ನು ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಡೋಜರ್‌ ಮೇಷಿನ್‌ನ ಬಲ ಬದಿಯ ಹಿಂದಿನ ಟಯರ್‌ನ ಅಡಿಗೆ ಸುಜೀತ್‌ ಕುಮಾರನು ಸಿಲುಕಿ ಸುಜೀತ್‌ ಕುಮಾರ್‌ ನ ತಲೆ ಮುಖ ಮತ್ತು ದೇಹ ಜಜ್ಜಿ ಹೋಗಿ ಗಂಬೀರ ಗಾಯಗೊಂಡು ಆತನು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಡೋಜರ್ ಮೆಷೀನ್‌ ಅಪರೇಟರ್‌ ಮಹಮ್ಮದ್‌ ಮಿರಾಜ್‌ ಮತ್ತು ಪ್ಲಾಂಟ್‌ ಮ್ಯಾನೆಜರ್‌ ರಾಘವೇಂದ್ರ ವಿರುದ್ದ ಮೂಡಬಿದರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love