ರಾಮಕೃಷ್ಣ ಮಿಷನ್ 7 ನೇ ವಾರದ ಸ್ವಚ್ಛತಾ ಅಭಿಯಾನದ, ಶ್ರಮದಾನ, ಸ್ವಚ್ಛ ಮನಸ್ಸು ಹಾಗೂ ಸ್ವಚ್ಛ ಗ್ರಾಮಗಳ ವರದಿ

Spread the love

ರಾಮಕೃಷ್ಣ ಮಿಷನ್ 7 ನೇ ವಾರದ ಸ್ವಚ್ಛತಾ ಅಭಿಯಾನದ, ಶ್ರಮದಾನ, ಸ್ವಚ್ಛ ಮನಸ್ಸು ಹಾಗೂ ಸ್ವಚ್ಛ ಗ್ರಾಮಗಳ ವರದಿ

ಮಂಗಳೂರು: ನಾಲ್ಕನೇ ಹಂತದ  ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು  ಅಭಿಯಾನದ 7 ನೇ ವಾರದ ಸ್ವಚ್ಛತಾ ಕಾರ್ಯಕ್ಕೆ 17ನೇ ಡಿಸೆಂಬರ್ 2017 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಮಾರ್ನಮಿಕಟ್ಟೆ ಕಾಸ್ಸಿಯಾ ಶಾಲೆಯ  ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಡಾ. ರಾಜೇಂದ್ರ ಪ್ರಸಾದ್ ಹಾಗೂ ಅನಿವಾಸಿ ಭಾರತೀಯರಾದ ಉಲ್ಲಾಸ್ ಹಿರೇಮಠ ಅಭಿಯಾನವನ್ನು ಶುಭಾರಂಭಗೊಳಿಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸಿಂಡಿಕೇಟ್ ಸದಸ್ಯ  ಹರೀಶ್ ಆಚಾರ್, ಸತ್ಯನಾರಾಯಣ ಕೆ ವಿ, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಚ್ಛತೆ: ಮೊದಲಿಗೆ ಸುಮಾರು ನೂರಕ್ಕೂ ಅಧಿಕ ಕಾರ್ಯಕರ್ಯರನ್ನು ನಾಲ್ಕು ಗುಂಪುಗಳನ್ನಾಗಿ, ಕಾರ್ಯವನ್ನು ಹಂಚಿಕೆ ಮಾಡಲಾಯಿತು. ಲೆಕ್ಕ ಪರಿಶೋಧಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಕಾಸ್ಸಿಯಾ ಶಾಲೆಯ ಮುಂಭಾಗ ಹಾಗೂ ಮಂಗಳಾದೇವಿ ರಥಬೀದಿಯನ್ನು ಕಸಗುಡಿಸಿ ಶುಚಿಗೊಳಿಸಲಾಯಿತು. ಅಲ್ಲದೇ ರಸ್ತೆಯ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್ ಗಳನ್ನು ಹೆಕ್ಕಿ ತೆಗೆಯಲಾಯಿತು. ಶ್ರೀಮತಿ ರತ್ನಾ ಆಳ್ವ  ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಮನೆ ಮನೆಗಳಿಗೆ ತೆರಳಿ ಕರಪತ್ರ ವಿತರಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸಿದರು.

ಜನಪಯೋಗಿ ಕಾರ್ಯ: ಕಾಸ್ಸಿಯಾ ಶಾಲೆಯ ಮುಂಭಾದಲ್ಲಿರುವ ಕಾಲುದಾರಿಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಬಿಸಾಡಲಾಗುತ್ತಿತ್ತು. ಶಾಲಾ ಮಕ್ಕಳು ಕಾಲುದಾರಿಯನ್ನು ಉಪಯೋಗಿಸದೇ ಮೂಗುಮುಚ್ಚಿಕೊಂಡು ಶಾಲೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ಅಭಿಯಾನದ ಮುಖ್ಯ ಸಂಯೋಜಕ ದಿಲ್ ರಾಜ್ ಆಳ್ವ , ಉಮಾನಾಥ್ ಕೋಟೆಕಾರ್ ಹಾಗೂ  ದಿನೇಶ್ ಕರ್ಕೇರಾ  ನೇತೃತ್ವದಲ್ಲಿ ಕಳೆದೆರಡು ವಾರಗಳಿಂದ ಸ್ವಚ್ಛ ಮಂಗಳೂರು ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ತ್ಯಾಜ್ಯವನ್ನು  ಮಾರ್ಗದಲ್ಲಿ ಬಿಸಾಡದಂತೆ ವiನವೊಲಿಸಲು ಯಶಸ್ವಿಯಾದರು. ಬಳಿಕ ಕಳೆದ ಅನೇಕ ದಿನಗಳಿಂದ ಅಚ್ಚುಕಟ್ಟಾಗಿ ಹೊಸತಾಗಿ ಕಾಲುದಾರಿಯನ್ನು ರಚಿಸಿ  ಇಂಟರ್ ಲಾಕ್ ಬಳಸಿ ವ್ಯವಸ್ಥಿತವಾಗಿ ಪುಟ್ ಪಾಥ್ ಮಾಡಲಾಗಿದೆ. ಅಲ್ಲದೇ ಅದೇ ಕಾಲುದಾರಿಯ ಮಧ್ಯದಲ್ಲಿದ್ದ  ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅನೇಕ ದಾರಿಹೋಕರಿಗೆ ಕಾಣಿಸದೇ ಅನೇಕರ ಮುಖ ಕೈಗಳಿಗೆ ತಾಗಿ ಅಪಘಾತವಾಗುತ್ತಿತ್ತು. ಅದನ್ನು ತಡೆಯಬೇಕೆನ್ನುವ ಉದ್ದೇಶದಿಂದ ಅಲ್ಲಿಂದು ನೂತನವಾಗಿ ರೇಲಿಂಗ್ ಅಳವಡಿಸಲಾಗಿದೆ. ತ್ಯಾಜ್ಯ ತುಂಬಿ, ಸದಾ ವಾಸನೆಯಿಂದ ಕೂಡಿರುತ್ತಿದ್ದ ಸ್ಥಳವಿಂದು ಸುಂದರ ಹೂಕುಂಡಗಳಿಂದ ಕಂಗೊಳಿಸುತ್ತಿದೆ.

ಪೆÇೀಸ್ಟರ್ ತೆರವು ಕಾರ್ಯಾಚರಣೆ: ಬೆಳಿಗ್ಗೆ 7-30 ರಿಂದ ಸುಮಾರು 2 ಗಂಟೆಯ ಕಾಲ ಸುಮಾರು 40 ಯುವಕರು ನಗರದ ತುಂಬೆಲ್ಲ ಹರಡಿದ್ದ ಸಾವಿರಕ್ಕೂ ಅಧಿಕ ಅನಧಿಕೃತ ಹಾಗೂ ಬ್ಯಾನರ್, ಬಂಟಿಂಗ್ಸ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದರು. ಮೂರು ತಂಡವಾಗಿ ಕಾರ್ಯಕರ್ತರು ಕಾರ್ಯಾಚರಣೆ ಮಾಡಿದರು. ಶಿಶಿರ ಅಮೀನ್, ಸೌರಜ್, ಸತೀಶ್ ಮೂಡಿಗೆರೆ ತಲಾ ಒಂದೊಂದು ತಂಡದ ನೇತೃತ್ವ ವಹಿಸಿದ್ದರು. ವೆಲೆನ್ಸಿಯಾ, ಕಂಕನಾಡಿ, ಬಲ್ಮಠ, ಬೆಂದೂರವೆಲ್, ಆಗ್ನೇಸ್, ಕದ್ರಿ, ಕದ್ರಿ ಪಾರ್ಕ್, ನಂತೂರು,  ಹಂಪಣಕಟ್ಟೆ, ಕೊಡಿಯಾಲ್ ಬೈಲ್, ಎಂ ಜಿ ರಸ್ತೆ, ಲೇಡಿಹಿಲ್ ರಸ್ತೆ ಮತ್ತಿತರ ಮುಖ್ಯ ರಸ್ತೆಗಳಲ್ಲಿರುª,À  ನಗgದÀ ಸೌಂದರ್ಯಕ್ಕೆ ಧÀಕ್ಕೆ ತರುತ್ತಿದ್ದ ಬ್ಯಾನರ್ ಪೆÇೀಸ್ಟರ್ ಗಳನ್ನು ತೆಗೆಯಲಾಯಿತು.

ಸ್ವಚ್ಛ ಯಕ್ಕೂರು: ರಾಮಕೃಷ್ಣ ಮಿಷನ್ ಕಾರ್ಯಕರ್ತರು ಯಕ್ಕೂರಿನಲ್ಲಿಯೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶ್ರಿಮತಿ ಶ್ರೀಲತಾ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ನಂದಾದೀಪ ಮಹಿಳಾ ಮಂಡಳಿ, ಹಿಂದೂ ಯುವಸೇನೆ, ಅಯ್ಯುಪ್ಪ ಭಜನಾ ಮಂಡಲಿಯ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಶ್ರೀ ಪ್ರಶಾಂತ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.

ಸ್ವಚ್ಛ ಗ್ರಾಮ: ಕೋಟೆಕಾರ, ಕೊಣಾಜೆ, ಉಳ್ಳಾಲ, ಪೆರ್ಮನ್ನೂರು, ಸೋಮೆಶ್ವರ, ಮುನ್ನೂರು, ಮಂಜನಾಡಿ, ಮತ್ತಿತರ ಕಡೆಗಳಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು. ಬೆಳಿಗ್ಗೆ 7-30 ರಿಂದ 10 ಗಂಟೆಯವರೆಗೆ ಅಭಿಯಾನ ನಡೆಯಿತು. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು ಭಾಗವಹಿಸಿದ್ದ ಎಲ್ಲ ಕಾರ್ಯಕರ್ತರಿಗೆ ಸ್ವಚ್ಛತಾ ಸಲಕರಣೆಗಳು, ಕರಪತ್ರಗಳು, ಟೀಶರ್ಟ್ ಒದಗಿಸಲಾಗಿತ್ತು. ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಮಹೇಶ್ ಕೊಲ್ಯ ಅಭಿಯಾನವನ್ನು ಸಂಯೋಜಿಸಿದರು. ಶ್ರೀ ಸತೀಶ್ ಕುಂಪ¯ ಸಂಘಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಕಾರದಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಯುತ್ತಿದೆ.

ಸ್ವಚ್ಛ ಮನಸ್ಸು : ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಸುತ್ತಮುತ್ತಲಿನ 87 ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳು ಜರುಗಿದವು. ಸ್ವಚ್ಛತಾ ಸ್ಪರ್ಧಾ ಎನ್ನುವ ಶೀರ್ಷಿಕೆಯಡಿಯಲ್ಲಿ 8825 ವಿದ್ಯಾರ್ಥಿಗಳು ಭಾಗವಹಿಸಿದರು.  ಪ್ರಬಂಧ ಸ್ಪರ್ಧೆಯಲ್ಲಿ 3177, ಚಿತ್ರಕಲಾ ಸ್ಪರ್ಧೆಯಲ್ಲಿ 4148 ಹಾಗೂ ಭಾಷಣ ಸ್ಪರ್ಧೆಯಲ್ಲಿ 1500 ವಿದ್ಯಾರ್ಥಿಗಳು ಭಾಗವಹಿಸಿದರು. ಶ್ರೀ ಎಂ ಆರ್ ವಾಸುದೇವ್, ಶ್ರೀ ಸದಾನಂದ ಉಪಾಧ್ಯಾಯ, ಶ್ರೀಮತಿ ಭಾರತೀ ಭಟ್, ಶ್ರೀ ರಾಜಮಣಿ ರಾಮಕುಂಜ, ಶ್ರೀಮತಿ ಸುಭದ್ರಾ ಭಟ್, ಶ್ರೀ ಸಂತೋಷ ಡಿಸೋಜಾ ಸೇರಿದಂತೆ 50 ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಸ್ವಚ್ಛ ಮನಸ್ಸು ಅಭಿಯಾನದ ನೇತೃತ್ವವಹಿಸಿದ್ದರು. ಶ್ರೀ ರಂಜನ್ ಬೆಳ್ಳರಪಾಡಿ ಸ್ವಚ್ಛ ಮನಸ್ಸು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.


Spread the love