ರಾಷ್ಟ್ರಪತಿ ಉಡುಪಿ ಭೇಟಿ : ಕಲ್ಯಾಣಪುರ ವಾರದ ಸಂತೆ ರದ್ದು

Spread the love

ರಾಷ್ಟ್ರಪತಿ ಉಡುಪಿ ಭೇಟಿ : ಕಲ್ಯಾಣಪುರ ವಾರದ ಸಂತೆ ರದ್ದು

ಉಡುಪಿ: ರಾಷ್ಟ್ರಪತಿಯ ಪ್ರಣಬ್ ಮುಖರ್ಜಿಯವರು ಜೂನ್ 18 ರಂದು ಉಡುಪಿ ಜಿಲ್ಲೆಗೆ ಸರ್ಕಾರದ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕೊಲ್ಲೂರಿಗೆ ಸಹ ಭೇಟಿ ನೀಡಲು ಎನ್ ಹೆಚ್ 66 ರ ಮಾರ್ಗವಾಗಿ ಸಂಚರಿಸಲಿರುವ್ಯದರಿಂದ ಸದರಿ ದಿನಾಂಕದಂದು ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನಡೆಯುವ ವಾರದ ಸಂತೆಯನ್ನು ಮುಂಜಾಗ್ರತೆ ಹಾಗೂ ರಕ್ಷಣೆಯ ಹಿತದೃಷ್ಟಿಯಿಂದ ರದ್ದುಪಡಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love