ಅಂಗನವಾಡಿ ಕೇಂದ್ರಗಳಿಗೆ ಸಚಿವೆ ಡಾ.ಜಯಮಾಲಾ ಭೇಟಿ

Spread the love

ಅಂಗನವಾಡಿ ಕೇಂದ್ರಗಳಿಗೆ ಸಚಿವೆ ಡಾ.ಜಯಮಾಲಾ ಭೇಟಿ

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಅವರು ಇಂದು ಮಂಗಳೂರು ನಗರದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು.

ಮಂಗಳೂರು ನಗರದ ಬಿಜೈ ಕಾಪಿಕಾಡ್ ಹಾಗೂ ಶಕ್ತಿನಗರ ಪದವು ಅಂಗನವಾಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ  ನೀಡಿ ನೀಡಿದ ಸಚಿವೆ ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ, ಬಿಸಿಯೂಟ ಕಾರ್ಯಕರ್ತೆಯರೊಂದಿಗೆ  ಸಮಾಲೋಚನೆ ನಡೆಸಿದರು.

ಬಿಜೈ ಅಂಗನವಾಡಿಯಲ್ಲಿ  ಮಕ್ಕಳಿಗೆ ವಿತರಿಸಲಾಗುತ್ತಿದ್ದ ಊಟವನ್ನು ಸಚಿವೆ ಡಾ.ಜಯಮಾಲಾ ಅವರು ಪರಿಶೀಲನೆ ನಡೆಸಿದರು. ಊಟ ಬಡಿಸುತ್ತಿದ್ದ ಕಾರ್ಯಕರ್ತೆಯೊರೊಂದಿಗೆ ಊಟದ ಶುಚಿ ರುಚಿ ಬಗ್ಗೆ ವಿಚಾರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಊಟದ ಬಗ್ಗೆ ಮಾಹಿತಿ ಪಡಕೊಂಡರು.

ಬಿಜೈ ಅಂಗನವಾಡಿಯ ಸುತ್ತಮುತ್ತ ಶುಚಿತ್ವ ನಿರ್ಹಿಸಿ,  ಮಕ್ಕಳಿಗೆ ಹೊರಂಗಣ ಆಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಭಾಗವಹಿಸಿದ್ದರು. ಊಟದ ಮೆನು ಕಾರ್ಡ್ ನಲ್ಲಿರುವ ರೀತಿಯಲ್ಲಿ ಊಟ ಸರಬರಾಜು ಮಾಡಬೇಕು , ಹಾಗೂ ಕರಾವಳಿ ಭಾಗದ ವಾತಾವರಣವನ್ನು ಗಮನಿಸಿಕೊಂಡು ಮಕ್ಕಳಿಗೆ ಮಜ್ಜಿಗೆ ಕೊಡುವ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನಿರ್ದೇಶನ ನಿಡೀದರು. ಬಿಜೈ ಅಂಗನವಾಡಿ ಹೊಸ ಕಟ್ಟಡ ನಿರ್ಮಿಸಲು ಬೇಕಾದ ಸ್ಥಳಾವಕಾಶ ಸರಕಾರಿ ಶಾಲೆಯ ವ್ಯಾಪ್ತಿ ಯಿಂದ ಒದಗಿಸಲು ಬೇಕಾದ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದರು.

ಶಕ್ತಿನಗರದ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಹಾಗೂ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಶಕ್ತಿನಗರದಲ್ಲಿ ಅಂಗನವಾಡಿ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವಂತೆ ಸಚಿವರು ನಿರ್ದೇಶನ ನೀಡಿದರು.ಶಕ್ತಿನಗರ ಅಂಗನವಾಡಿಯಲ್ಲಿ  ದಾಸ್ತಾನು ಕೊಠಡಿಯನ್ನು ಪರಿಶೀಲನೆ ನಡೆಸಿ ಧವಸಧಾನ್ಯಗಳ ಗುಣಮಟ್ಟ ಪರಿಶೀಲನೆ ನಡೆಸಿದರು.


Spread the love