ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪ್ರೀಮಿಯರ್ ಲೀಗ್ ಕ್ರೀಡಾಕೂಟ ಉದ್ಘಾಟನೆ
ಮಂಗಳೂರು: ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಆಯುಷ್ ಶೆಟ್ಟಿ ಯವರು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಪ್ರೀಮಿಯರ್ ಲೀಗ್ ಕ್ರೀಡಾಕೂಟವನ್ನು ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು.
ಅಸೋಸಿಯೇಷನ್ ಇದರ ವತಿಯಿಂದ ಆಯುಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಸನ್ಮಾನದೊಂದಿಗೆ 2 ಲಕ್ಷದ ಚೆಕ್ಕನ್ನು ನೀಡಲಾಯಿತು. ತದನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಮಕ್ಕಳೊಂದಿಗೆ ಸಂವಾದವನ್ನು ನಡೆಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಪರವಾಗಿ ಅಪರ ಜಿಲ್ಲಾಧಿಕಾರಿಯದ ಶ್ರೀ ರಾಜು, ಯುವಜನ ಸಬಲೀಕರಣದ ಉಪನಿರ್ದೇಶಕರಾದ ಪ್ರದೀಪ್ ಡಿಸೋಜ, ಹಾಗೂ ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಆದ ಅರುಣ್ ಪ್ರಭ ಹಾಗೂ ಏಕೆ ಆಪಲ್ ಗ್ರೂಪಿನ ಮಾಲಕರಾದ ಏಕೆ ನಿಯಾಜ್ ಇವರು ಅತಿಥಿಯಾಗಿದ್ದರು ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಶೋಕ್ ಹೆಗಡೆ ಹಾಗೂ ಅಬಿದ್ ಅಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರ ಸ್ವಾಗತಿಸಿದರು ಕಾರ್ಯದರ್ಶಿಯಾದ ಸುಪ್ರೀತಾಳವವರು ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮವನ್ನು ಡಾ. ಶರತ್ ಹಾಗೂ ಕುಮಾರಿ ನಿಧಿ ನಿರೂಪಿಸಿದರು.













