ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿ; ಆರೋಪಿಯ ಬಂಧನ

Spread the love

ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿ; ಆರೋಪಿಯ ಬಂಧನ

ಮಂಗಳೂರು: ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾದ ವ್ಯಕ್ತಿಯನ್ನು ಬಂದರು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಸ್ಸಾಂ ನಿವಾಸಿ ಜಸೀಮ್ ಉದ್ದೀನ್ ಯಾನೆ ಜಸ್ಮುದ್ದೀನ್ ಲಷ್ಕರ್ (41) ಎಂದು ಗುರುತಿಸಲಾಗಿದೆ.

ಅಗೊಸ್ತ್ 11 ರಂದು ಬಿಬಿ ಅಲಾಬಿ ರಸ್ತೆಯಲ್ಲಿ ಇಸ್ಮಾಯಿಲ್ ಅವರ ಅಂಗಡಿಯಲ್ಲಿ ಕೆಲಸಕ್ಕಿದ್ದ ಜಸ್ಮುದ್ದೀನ್ ಅಂಗಡಿಯಲ್ಲಿಟ್ಟಿದ್ದ ರೂ 9,25,000 ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದು ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಗರ ಕಮೀಷನರ್ ಸುರೇಶ್ ಅವರ ಆದೇಶದಂತೆ ಡಿಸಿಪಿ ಹನುಮಂತರಾಯ, ಸಹಾಯಕ ಪೋಲಿಸ್ ಆಯುಕ್ತ ಉದಯ್ ನಾಯಕ್ ಅವರ ನಿರ್ದೇಶನದಂತೆ ಪೋಲಿಸ್ ನಿರೀಕ್ಷ ಶಾಂತರಾಮ್ ಮತ್ತು ಅವರ ತಂಡ ಆರೋಪಿಯನ್ನು ಗೋವಾ ರಾಜ್ಯದ ಕೊಂಕಣ ರೈಲ್ವೆ ಪೋಲಿಸ್ ಠಾಣೆ ಮಾರ್ಗೋವಾ ಇವರ ಸಹಕಾರದಲ್ಲಿ ಆರೋಪಿಯನ್ನು ಬಂಧಿಸಿ ಆತನಲ್ಲಿದ್ದ ರೂ 9 ಲಕ್ಷವನ್ನು ವಶಪಡಿಸಿಕೊಂಡಿದ್ದು ಉಳಿದ ರೂ 25000 ವನ್ನು ಸ್ತಂತಕ್ಕೆ ಖರ್ಚುಮಾಡಿರುತ್ತಾನೆ. ಆರೋಪಿಯ ವಿಚಾರಣೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.

ತನಿಖೆಯ ಕಾರ್ಯಾಚರಣೆಯಲ್ಲಿ ಉತ್ತರ ಪೋಲಿಸ್ ನಿರೀಕ್ಷಕರಾದ ಶಾಂತಾರಾಮ, ಎಎಸ್ ಐ ಪದ್ಮನಾಭ, ಶೋಭಾ, ಹೆಚ್ ಸಿ ಸುಜನ್ ಶೆಟ್ಟಿ, ಪಿಸಿ ಗೋವರ್ಧನ್ ಭಾಗವಹಿಸಿ ಪತ್ತೆಗೆ ಸಹಕಿಸಿದ್ದಾರೆ.


Spread the love