ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ -ಪುಟಾಣಿಗಳಿಗೆ ಬೀಳ್ಕೊಡುಗೆ

Spread the love

ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ -ಪುಟಾಣಿಗಳಿಗೆ ಬೀಳ್ಕೊಡುಗೆ 

ಮಂಗಳೂರು : ಪುತ್ತೂರು ನಗರದ ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಹಾಗೂ ಈ ವರ್ಷ ಅಂಗನವಾಡಿ ಕೇಂದ್ರವನ್ನು ಬಿಟ್ಟು ಹೋಗುವ ಮಕ್ಕಳ ಬೀಳ್ಕೊಡುಗೆ ಸಮಾರಂಭವು ನಡೆಯಿತು.

ಪುಟಾಣಿಗಳು ದೀಪ ಬೆಳಗಿಸಿ ಪ್ರಾರ್ಥಿಸಿದರು. ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಬಾಲವಿಕಾಸ ಸಮಿತಿಯ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭಾ ಪೌರಾಯುಕ್ತೆ ರೂಪಾ ಡಿ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ವರದಿ ವಾಚಿಸಿದರು. ಪುಟಾಣಿಗಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಂತರ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

ಸ್ಥಳೀಯರು ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ನೀಡಿದ ವಿವಿಧ ಕೊಡುಗೆಗಳನ್ನು ಸ್ವೀಕರಿಸಲಾಯಿತು. ನಳಿನಾಕ್ಷಿ ಜನಾರ್ದನ್ ನಿರೂಪಿಸಿ, ಸ್ವರ್ಣಲತಾ ಹೆಗ್ಡೆ ವಂದಿಸಿದರು.


Spread the love