ಅಕ್ರಮ ಚಟುವಟಿಕೆ ದೂರು ಕದ್ರಿ ಹೆಡ್ ಕಾನ್ಸ್ ಟೇಬಲ್‌ ಪ್ರಶಾಂತ್ ಶೆಟ್ಟಿ ಅಮಾನತು

Spread the love

ಅಕ್ರಮ ಚಟುವಟಿಕೆ ದೂರು ಕದ್ರಿ ಹೆಡ್ ಕಾನ್ಸ್ ಟೇಬಲ್‌ ಪ್ರಶಾಂತ್ ಶೆಟ್ಟಿ ಅಮಾನತು

ಮಂಗಳೂರು: ಕದ್ರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್‌ ಪ್ರಶಾಂತ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕಾಶ್ ಶೆಟ್ಟಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತ ಹರ್ಷ “ಪ್ರಕಾಶ್ ಶೆಟ್ಟಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಗ್ಗೆ ಸಾಕಷ್ಡು ದೂರುಗಳು ಬಂದಿತ್ತು. ಅದಕ್ಕಾಗಿ ಅಮಾನತುಗೊಳಿಸಿ ವಿಚಾರಣೆ ಮಾಡಲಾಗುವುದು. ಯಾರೇ ಆಗಲಿ, ಕಾನೂನು‌ ಮೀರಿ ವರ್ತಿಸಿದರೆ ಪೊಲೀಸ್ ಇಲಾಖೆಯು ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


Spread the love