ಅಕ್ರಮ ಮಟ್ಕಾ  ಕೇಂದ್ರಕ್ಕೆ ದಾಳಿ – ನಾಲ್ವರ ಬಂಧನ

Spread the love

ಅಕ್ರಮ ಮಟ್ಕಾ  ಕೇಂದ್ರಕ್ಕೆ ದಾಳಿ – ನಾಲ್ವರ ಬಂಧನ

ಮಂಗಳೂರು: ಅಕ್ರಮ ಜೂಜು ಕೇಂದ್ರಕ್ಕೆ ಕಂಕನಾಡಿ ನಗರ ಪೋಲಿಸರು ಧಾಳಿ ನಡೆಸಿ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಜಪ್ಪಿನಮೊಗರು ನಿವಾಸಿ ಶೈಲೇಶ್ ಶೆಟ್ಟಿ (33), ಬಂಟ್ವಾಳ ನೇರಳೆಕಟ್ಟೆ ನಿವಾಸಿ ಜಯರಾಮ (40), ಬೆಳ್ತಂಗಡಿ ಲಾಯಿಲಾ ನಿವಾಸಿ ರಮೇಶ್ (28) ಮತ್ತು ಎಕ್ಕೂರು ನಿವಾಸಿ ಸುಕೇಶ್ (36) ಎಂದು ಗುರುತಿಸಲಾಗಿದೆ.

ಬುಧವಾರ    ಪಂಪುವೆಲ್ ವಿಶ್ವಜೀತ್ ವೈನ್ಸ್ ಬಳಿ ಮಟ್ಕಾ ಜೂಜು ಆಡುತ್ತಿದ್ದಾರೆಂದು ಮಾಹಿತಿ ಬಂದಂತೆ  ಕಂಕನಾಡಿ ನಗರ ಠಾಣಾ ಪೊಲೀಸರು ತಮ್ಮ  ಸಿಬ್ಬಂದಿಯವರೊಂದಿಗೆ  ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜೂಜು  ಆಟಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದ  ನಾಲ್ವರು ಆರೋಪಿಗಳನ್ನು  ವಶಕ್ಕೆ ಪಡೆದಿದ್ದು  ಆರೋಪಿಗಳಿಂದ ಮಟ್ಕಾ  ಜೂಜಾಟಕ್ಕೆ ಹಣ ಸಂಗ್ರಹಿಸಿದ್ದಾಗಿದೆ. ಸದ್ರಿ ಅರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 3- ಮೊಬೈಲ್ ಗಳನ್ನು ಹಾಗೂ ನಗದು ಹಣ ರೂ  4300/-  ವನ್ನು ಸ್ವಾಧೀನಪಡಿಸಿಕೊಂಡಿದ್ದು ಒಟ್ಟು ಮೌಲ್ಯ  ರೂ 13300/-  ಆಗಿದೆ.

ಈ ಕಾರ್ಯಾಚರಣೆಯನ್ನು ಮಂಗಳೂರು ನಗರದ  ಉಪ ಪೊಲೀಸ್ ಆಯುಕ್ತರಾದ   ಹನುಮಂತರಾಯ (ಐ.ಪಿ.ಎಸ್.) ಮತ್ತು ಲಕ್ಷ್ಮಿ ಗಣೇಶ್ ಕೆ, ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ  ಕೋದಂಡರಾಮ್ ಟಿ  ರವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ನಿರೀಕ್ಷಕರಾದ  ಅಶೋಕ ಪಿ  ರವರ ನೇತೃತ್ವದದಲ್ಲಿ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ಮತ್ತು ಠಾಣಾ ಸಿಬ್ಬಂದಿಗಳು ಪತ್ತೆ ಕಾರ್ಯ ನಡೆಸಿರುವುದಾಗಿದೆ


Spread the love