ಅಪರಿಚಿತರಿಂದ ಉಡುಪಿ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರಿನ ಬ್ಯಾನರ್ ಅಳವಡಿಕೆ

Spread the love

ಅಪರಿಚಿತರಿಂದ ಉಡುಪಿ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರಿನ ಬ್ಯಾನರ್ ಅಳವಡಿಕೆ

ಉಡುಪಿ: ರಾಜ್ಯದಲ್ಲಿ ಸಾವರ್ಕರ್ ಹೆಸರು ಪ್ರಸ್ತಾಪದಲ್ಲಿರುವಾಗಲೇ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ಗೆ ವೀರ ಸಾವರ್ಕರ್ ಎಂದು ನಾಮಕರಣ ಮಾಡಲಾಗಿದ್ದ ವಿಷಯ ಹಸಿಯಾಗಿರುವಾಗಲೇ ಉಡುಪಿಯಲ್ಲಿ ಕೂಡ ಬ್ಯಾನರ್ ಭರಾಟೆ ಮುಂದುವರೆದಿದೆ.

ಉಡುಪಿಯ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಬೈಪಾಸ್ ಬಳಿಯ ಮೇಲ್ಸೆತುವೆಗೆ ಪೇಜಾವರ ಸ್ವಾಮೀಜಿಗಳ ಹೆಸರನ್ನು ಬರೆದ ಬ್ಯಾನರ್ ಪತ್ತೆಯಾಗಿದೆ.

ಇತ್ತೀಚೆಗೆ ಮಂಗಳೂರಿನ ಪಂಪ್ ವೆಲ್ ಸೇತುವೆಗೆ ವೀರಸಾವರ್ಕರ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆಗೆ ರಾಣಿ ಅಬ್ಬಕ್ಕ ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಇಟ್ಟ ಬೆನ್ನಲ್ಲೆ ಶನಿವಾರ ಉಡುಪಿಯ ಕರಾವಳಿ ಬೈಪಾಸ್ ಎಂಬ ಬೋರ್ಡು ಪ್ರತ್ಯಕ್ಷ ವಾಗಿದೆ

ಬೆಂಗಳೂರಿನ ಯಲಹಂಕ ಸೇತು ವಿವಾದದ ಬಳಿಕ ಅಲ್ಲಲ್ಲಿ ಕಂಡು ಬರುತ್ತಿರುವ ವಿದ್ಯಮಾನ ಈಗ ಉಡುಪಿ ಜಿಲ್ಲೆಯಲ್ಲಿ ಕೂಡ ಮುಂದುವರೆದಿದ್ದು ಜಿಲ್ಲೆಯ ಜನರಲ್ಲಿ ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.


Spread the love