ಆಗುಂಬೆ- ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿ

Spread the love

ಆಗುಂಬೆ- ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿ

ಉಡುಪಿ :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಂಗಳೂರು ವಿಭಾಗ, ಉಡುಪಿ ಘಟಕದಿಂದ ಉಡುಪಿ, ಆಗುಂಬೆ ಮಾರ್ಗವಾಗಿ ಶಿವಮೊಗ್ಗಕ್ಕೆ ಮತ್ತು ಶಿವಮೊಗ್ಗದಿಂದ ಆಗುಂಬೆ ಮಾರ್ಗವಾಗಿ ಮಣಿಪಾಲ, ಉಡುಪಿಗೆ ಬಸ್ಸುಗಳು ಈ ಕೆಳಕಂಡ ಸಮಯದಲ್ಲಿ ಕಾರ್ಯಾಚರಿಸುತ್ತಿರುತ್ತವೆ.

ಉಡುಪಿಯಿಂದ ಶಿವಮೊಗ್ಗ ಕಡೆಗೆ ಬೆಳಗ್ಗೆ 7, 7.15, 8.10, 9.10, 10.10 ಮತ್ತು ಮಧ್ಯಾಹ್ನ 1.25, 3.15, 3.55, 4.45, 5.05 ಗಂಟೆಗೆ ಹಾಗೂ ಶಿವಮೊಗ್ಗದಿಂದ ಆಗುಂಬೆ, ಮಣಿಪಾಲ, ಉಡುಪಿಗೆ ಬೆಳಗ್ಗೆ 3.15, 5, 6, 6.40, 7.30 ಮತ್ತು ಮಧ್ಯಾಹ್ನ 12.20, 1.50, 3, 3.30, 4.10 ಗಂಟೆಗೆ ಕಾರ್ಯಾಚರಿಸುತ್ತಿವೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಬುಕ್ಕಿಂಗ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, www.ksrtc.in ಗೆ ಲಾಗಿನ್ ಆಗಿ ಮುಂಚಿತವಾಗಿ ಸೀಟುಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಉಡುಪಿ ಘಟಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love