ಆರ್.ಎಸ್.ಎಸ್ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ದಕ ಜಿಲ್ಲಾ ಬಿಜೆಪಿ

Spread the love

ಆರ್.ಎಸ್.ಎಸ್ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ: ದಕ ಜಿಲ್ಲಾ ಬಿಜೆಪಿ

ಮಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ತನಿಯಪ್ಪ ಮಡಿವಾಳರ ಪುತ್ರ ಶರತ್ ಎಂಬವರ ಮೇಲೆ ಕೆಲವೊಂದು ಮತೀಯವಾದಿಗಳಿಂದ ನಡೆದ ಮಾರಣಾಂತಿಕ ಹಲ್ಲೆಯನ್ನು ದ.ಕ.ಜಿಲ್ಲಾ ಬಿಜೆಪಿ ಅತ್ಯಂತ ಉಗ್ರವಾಗಿ ಖಂಡಿಸಿದೆ.

ಯಾವುದೇ ಅಪರಾದಿ ಚಟುವಟಿಕೆಗಳಲ್ಲಿ ಇರದ ಸಂಘದ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಕೊಂಡಿರುವ ನಿಷ್ಠಾವಂತ ಕಾರ್ಯಕರ್ತ ಶರತ್‍ನ ಮೇಲೆ ನಡೆದ ಹಲ್ಲೆಯನ್ನು ಸಂಘ ಪರಿವಾರ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ.

ಸಂಘ ಪರಿವಾರದ ಪ್ರಮುಖರ ಮೇಲೆ ಕಾನೂನು ಕ್ರಮ ಜರಗಿಸಲು ಮುಂದಾಗಿರುವ ಈ ಜಿಲ್ಲೆಯ ಉಸ್ತುವಾರಿ ಸಚಿವರು ಮತೀಯವಾದಿಗಳಿಗೆ ನೀಡಿದ ಕುಮ್ಮಕ್ಕಿನಿಂದಲೇ ಈ ಹಲ್ಲೆ ನಡೆದಿರುತ್ತದೆ ಎಂದು ಸಾಬೀತಾಗಿರುತ್ತದೆ.

ಆದ್ದರಿಂದ ಈ ಹಲ್ಲೆಯ ಬಗ್ಗೆ ಜಿಲ್ಲೆಯ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಗಮನಹರಿಸಿ ಕೂಡಲೇ ತನಿಖೆ ಕೈಗೆತ್ತಿಕೊಂಡು ನಿಜವಾದ ಅಪರಾದಿಗಳನ್ನು ಬಂದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದಿದ್ದಲ್ಲಿ ಜಿಲ್ಲೆಯಲ್ಲಿ ಇದರ ವಿರುದ್ದ ಉಗ್ರ ಹೋರಾಟವನ್ನು ನಡೆಸುವುದಾಗಿ ಜಿಲ್ಲಾ ವಕ್ತಾರರಾದ ಜಿತೇಂದ್ರ ಎಸ್ ಕೊಟ್ಟಾರಿಯವರು ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.


Spread the love