ಆಶಿಕ್ ಕುಕ್ಕಾಜೆಗೆ ಸೇವಾ ರತ್ನ ಪ್ರಶಸ್ತಿ

Spread the love

ಆಶಿಕ್ ಕುಕ್ಕಾಜೆಗೆ ಸೇವಾ ರತ್ನ ಪ್ರಶಸ್ತಿ

ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ನಿವಾಸಿ ಅಬೂಬಕರ್ ಮುಸ್ಲಿಯಾರ್ ಹಾಗೂ ದುಲೈಕಾ ದಂಪತಿಗಳ ಪುತ್ರ ಆಶಿಕ್ ಕುಕ್ಕಾಜೆ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ & ಎವರ್ನೆಸ್ ಟ್ರಸ್ಟ್ (ರಿ.) ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ‘ಸೇವಾ ರತ್ನ’ ಪ್ರಶಸ್ತಿ 2018 ಡಿ. 16 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಜೇಸಿ ಭವನದಲ್ಲಿ ನೀಡಿ ಗೌರವಿಸಲಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಬಡ ರೋಗಿಗಳ, ಅಶಕ್ತರ ಬಗ್ಗೆ ಬರಹಗಳನ್ನು ಬರೆಯುವ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಹಣ ಸಂಗ್ರಹಿಸಿ ಅರ್ಹ ರೋಗಿಗಳ ಚಿಕಿತ್ಸೆಗೆ ನೆರವು ನೀಡುವುದರ ಮೂಲಕ ನಿಸ್ವಾರ್ಥವಾಗಿ ಬಡ ರೋಗಿಗಳ ಸೇವೆಯಲ್ಲಿ ತೊಡಗಿರುವ ಆಶಿಕ್ ಕುಕ್ಕಾಜೆ ಅವರ ಸೇವೆಯನ್ನು ಗುರುತಿಸಿ ಗೌರವಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.


Spread the love