ಆಹಾರದಲ್ಲಿ ವಿಷ ಹಾಕಿ ತಂದೆ ಹತ್ಯೆ ಯತ್ನ – ಇಬ್ಬರು ಪುತ್ರರ ಬಂಧನ

Spread the love

ಆಹಾರದಲ್ಲಿ ವಿಷ ಹಾಕಿ ತಂದೆ ಹತ್ಯೆ ಯತ್ನ – ಇಬ್ಬರು ಪುತ್ರರ ಬಂಧನ

ಸುಬ್ರಹ್ಮಣ್ಯ : ಮಕ್ಕಳಿಬ್ಬರು ಸೇರಿ ಹಂದಿ ಮಾಂಸ ಪದಾರ್ಥಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಅಂಜೇರಿಯಿಂದ ವರದಿಯಾಗಿದೆ.

ವಿಷಯುಕ್ತ ಆಹಾರ ಸೇವಿಸಿ ಹೊನ್ನಪ್ಪ ನಾಯ್ಕ ಅಂಜೇರಿ ಅಸ್ವಸ್ಥಗೊಂಡ ವ್ಯಕ್ತಿ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿನ ನಿವಾಸಿ ಹೊನ್ನಪ್ಪ ಎಂಬವರಿಗೆ ಆಸ್ತಿ ಪಾಲನ್ನು ಕೊಡಲಿಲ್ಲವೆಂಬ ಕಾರಣದಿಂದ ಸದರಿಯವರ ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ರವರು ಅಹಾರದಲ್ಲಿ ವಿಷ ಹಾಕಿ ಕೊಲೆಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ: 307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಈ ದಿನ ಆರೋಪಗಳನ್ನು ವಶಕ್ಕೆ ಪಡೆಯಲಾಗಿದೆ.


Spread the love