ಉಡುಪಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ 

Spread the love

ಉಡುಪಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ 

ಉಡುಪಿ: ಉಡುಪಿಯ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಉಡುಪಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸಹಕಾರಿ ಧುರೀಣ ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಸೊಸೈಟಿಯ ಕಟಪಾಡಿ ಶಾಖೆಯಲ್ಲಿ ನಡೆದ ಚುಣಾವಣಾ ಪ್ರಕ್ರೀಯೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಕಟಪಾಡಿಯ ಉದ್ಯಮಿ ಮಹೇಶ್ ಅಂಚನ್ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಸುನೀತಾ ಹೇರೂರು, ವಿದ್ಯಾ ದಿನಕರ್, ಶೇಖರ್. ಕೆ .ಪಾಲನ್, ಶಿವಾನಂದ್. ಆರ್. ಕೋಟ್ಯಾನ್,ವೈಷ್ಣವಿ.ವಿ.ನಾಯಕ್, ತೇಜೇಶ್ವರ್ ರಾವ್, ವಿನ್ಸೆಂಟ್ ಸಲ್ದಾನಾ, ರಾಜೇಶ್ ಶೆಟ್ಟಿ, ರಮೇಶ್ ಪೂಜಾರಿ ಆಯ್ಕೆ ಆದರು. ಚುಣಾವಣಾ ನಿರ್ವಹಣಾಧಿಕಾರಿಯಾಗಿ ಆಗಮಿಸಿದ್ದ ಸಹಕಾರಿ ಸಂಘಗಳ ಇನ್ಸ್ ಪೆಕ್ಟರ್ ಜ್ಯೋತಿ.ಡಿ ಚುಣಾವಣಾ ಪ್ರಕ್ರೀಯೆ ನಡೆಸಿ ಆಯ್ಕೆಯ ವಿವರ ನೀಡಿದರು.

ಮಾಜಿ ನಿರ್ದೇಶಕಿ ಉಷಾ ರಮೇಶ್ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಅಮೀನ್ ಉಪಸ್ಥಿತರಿದ್ದರು.


Spread the love