ಉಡುಪಿ ಜಿಪಂ ಸಿಇಒ ಪ್ರಸನ್ನ ಹೆಚ್ ವರ್ಗಾವಣೆ, ಪ್ರತೀಕ್ ಬಾಯಲ್ ನೂತನ ಸಿಇಒ

Spread the love

ಉಡುಪಿ ಜಿಪಂ ಸಿಇಒ ಪ್ರಸನ್ನ ಹೆಚ್ ವರ್ಗಾವಣೆ, ಪ್ರತೀಕ್ ಬಾಯಲ್ ನೂತನ ಸಿಇಒ

ಉಡುಪಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ನೂತನ ಸಿಇಒ ಆಗಿ ಬಿಬಿಎಂಪಿ ಬೆಂಗಳೂರು ಇದರ ವಿಶೇಷ ಭೂಸ್ವಾಧೀನ ಅಧಿಕಾರಿ ಪ್ರತೀಕ್ ಬಾಯಲ್ ಅವರನ್ನು ನೇಮಿಸಿದೆ.

ನಿರ್ಗಮನ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಅವರನ್ನು ಕರ್ನಾಟಕ ಪರೀಕ್ಷ ಮಂಡಳಿ ಇದರ ನಿರ್ದೇಶಕರನ್ನಾಗಿ ವರ್ಗಾವಣೆಗೊಳಿಸಿದೆ.


Spread the love