ಉಡುಪಿ ಜಿಲ್ಲಾ ಕಾಂಗ್ರೆಸ್-ಸೇವಾದಳ ವತಿಯಿಂದ ಗಣರಾಜ್ಯೋತ್ಸವ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್-ಸೇವಾದಳ ವತಿಯಿಂದ ಗಣರಾಜ್ಯೋತ್ಸವ

ಉಡುಪಿ: ಗಣರಾಜ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್-ಸೇವಾದಳ ಅದ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ಉಡುಪಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿಯವರು ಗಾಂಧಿ ಪ್ರತಿಮೆಗೆ ಮಾಲಾಪ೯ಣೆ ಮಾಡಿ ಗೌರವಿಸಿದರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಅಲೆವೂರು ಗಣಪತಿ ಕಿಣಿ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಿಶೋರ್ ಎರ್ಮಾಳ್, ದಿನೇಶ್ ಪುತ್ರನ್, ರಘುಪತಿ ಬಲ್ಲಾಳ್, ಶಬೀರ್ ಅಹಮದ್, ಹರೀಶ್ ಕಿಣಿ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಬ್ದುಲ್ ರೆಹಮಾನ್, ರೆನೋಲ್ಡ್ ಪ್ರವೀಣ್ ಕುಮಾರ್, ಜನಾರ್ದನ ಭಂಡಾರ್ಕರ್, ಮತ್ತಿತರರು ಈ ಸಂಭ್ರಮದಲ್ಲಿ ಪಾಲ್ಗೊಂಡರು.


Spread the love