ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಉಚಿತ ಸ್ಕೂಲ್ ಬ್ಯಾಗ್ ,ಕೂಡೆ ವಿತರಣೆ

Spread the love

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಉಚಿತ ಸ್ಕೂಲ್ ಬ್ಯಾಗ್ ,ಕೂಡೆ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಉಡುಪಿ, ಇವರ ಆಯೋಜನೆಯಲ್ಲಿ ಕ್ರೀಡಾ ಕೂಟ ಆಯೋಜಕ, ಸಾಮಾಜಿಕ ಕಾರ್ಯಕರ್ತ “ದಿ. ಎ.ಜೆ ಕಾಡಬೆಟ್ಟು” (ದಿ.ಜಗನಾಥ್) ಅವರ ಸ್ಮರಣಾರ್ಥವಾಗಿ ಟಿ.ಎ.ಪೈ ಮೊರ್ಡನ್ ಹಿರಿಯ ಪ್ರಾಥಮಿಕ ಶಾಲೆ ಕಾಡಬೆಟ್ಟು, ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕೊಡೆ- ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.

ನಾಗರೀಕ ಸಮಿತಿಯ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹಾಗೂ ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಜಯರಾಮ ಗೌಡ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಿದರು.

ಈ ಸಂದರ್ಬದಲ್ಲಿ ಮಾತನಾಡಿದ ನಿತ್ಯಾನಂದ ಒಳಕಾಡು ದಿವಂಗತ ಎ.ಜೆ ಕಾಡಬೆಟ್ಟು ದಾನಿ ಮಾತ್ರವಲ್ಲದೇ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದವರು.ಅನೇಕ ಶಾಲೆಗಳಿಗೆ ಸಮವಸ್ತ, ಪುಸ್ತಕ ವಿತರಿಸಿದ್ದಾರೆ. ಅವರ ಸವಿನೆನಪಿಗೆ 100 ಬ್ಯಾಗ್ ಹಾಗೂ 100 ಕೊಡೆಗಳನ್ನು ವಿತರಿಸಲಾಗುತ್ತಿದ್ದು ಈಗಾಗಲೇ ಅವರ ಸ್ಮರಣಾರ್ಥ ಪ್ರತೀ ವರ್ಷ ಈ ಶಾಲೆಗೆ ಕೊಡುಗೆಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಜಯರಾಮ ಗೌಡ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದಲ್ಲಿ ಶಾಲಾ ಮುಖ್ಯೋಪದ್ಯಾಯಿನಿ ಸಾವಿತ್ರಿ, ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷ ನಾರಾಯಣ ಭಂಡಾರಿ, ಸೇವಾ ಟ್ರಸ್ಟ್ ನ ಅದ್ಯಕ್ಷ ಎಚ್.ಆರ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.


Spread the love