ಉಪ್ಪಿನಂಗಡಿ: ಟ್ಯಾಂಕರ್‌ ನಲ್ಲಿ ಚಾಲಕನ ಮೃತದೇಹ ಪತ್ತೆ  

Spread the love

ಉಪ್ಪಿನಂಗಡಿ: ಟ್ಯಾಂಕರ್‌ ನಲ್ಲಿ ಚಾಲಕನ ಮೃತದೇಹ ಪತ್ತೆ  

ಉಪ್ಪಿನಂಗಡಿ: ನಿಲ್ಲಿಸಿದ್ದ ಟ್ಯಾಂಕರ್ ಲಾರಿಯ ಟ್ಯಾಂಕ್‍ನೊಳಗಡೆ ಚಾಲಕನ ಶವ ಪತ್ತೆಯಾದ ಘಟನೆ ಶುಕ್ರವಾರ ಶಿರಾಡಿ ಘಾಟಿಯ ಕೆಂಪು ಹೊಳೆಯಲ್ಲಿ ನಡೆದಿದ್ದು, ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ತಿರುಚಿ ಜಿಲ್ಲೆಯ ಪೆತ್ತುಪಟ್ಟ ಗ್ರಾಮದ ನಟರಾಜನ್ ಎಂಬವರ ಪುತ್ರ ನಾಗರಾಜ್ ಮೃತಪಟ್ಟ ಟ್ಯಾಂಕರ್ ಚಾಲಕ.

ನಾಗರಾಜ್ ಡಾಮರು ಕೊಂಡೊಯ್ಯುವ ಟ್ಯಾಂಕರ್ ನಲ್ಲಿ ಚಾಲಕನಾಗಿದ್ದು, ಗುರುವಾರ ಹೊಸೂರಿನಿಂದ ಮಂಗಳೂರಿಗೆ ಡಾಮರು ಲೋಡು ಮಾಡಲೆಂದು ಬರುತ್ತಿದ್ದರು. ಇವರ ಟ್ಯಾಂಕರ್ ಶಿರಾಡಿ ಘಾಟಿಯಲ್ಲಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅದರ ಟ್ಯಾಂಕ್‍ನೊಳಗಡೆ ಚಾಲಕನ ಶವ ಇರುವುದು ಶುಕ್ರವಾರ ಬೆಳಕಿಗೆ ಬಂದಿತ್ತು. ಮೂಗಿನಲ್ಲಿ ನೊರೆ ಬರುವುದು ಬಿಟ್ಟರೆ, ಮತ್ತೇನೂ ದೇಹದಲ್ಲಿ ಗಂಭೀರ ಗಾಯಗಳಿಲ್ಲ. ಟ್ಯಾಂಕರ್ ನ ಒಳಗಡೆ ಇಳಿದ ಈತ ಉಸಿರುಕಟ್ಟಿ ಅಥವಾ ಕೆಮಿಕಲ್ಸ್‍ನ ಗಾಳಿ ಸೇವನೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.


Spread the love