ಉಪ್ಪೂರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ

Spread the love

ಉಪ್ಪೂರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ

ಉಡುಪಿ: ಉಪ್ಪೂರು ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಸಚಿವರಾದ   ಪ್ರಮೋದ್ ಮಧ್ವರಾಜ್ ರವರ ನಿವಾಸದಲ್ಲಿ ಪ್ರಮೋದ್ ಮಧ್ವರಾಜ್ ರವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮವು ಮಾಜಿ ಸಚಿವರಾದ ಪ್ರಮೋದ್ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ನಡೆಯಿತು.

ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರವನ್ನು ಅಳವಿಡಿಸಿದ್ದ ಬೃಹತ್ ಟಿವಿ ಪರದೆಯಲ್ಲಿ ಲೈವ್ ವೀಕ್ಷಣೆ ಮಾಡುವ ಮೂಲಕ ಪ್ರದಗ್ರಹಣ ಸಮಾರಂಭವನ್ನು ಸಾಕ್ಷಿಕರಿಲಾಯಿತು. ಈ ವೇಳೆ ನಾಯಕರು ದೀಪ ಬೆಳಗಿಸುವ ಮೂಲಕ ಜಿಲ್ಲೆಯಲ್ಲಿ ಚಾಲನೆ ನೀಡಿದರು. ಅಲ್ಲದೆ ಸಂವಿಧಾನದ ಪೀಠಿಕೆಯ ಮೇಲೆ ಪ್ರಮಾಣವಚನ ಹಾಗೂ ಕಾಂಗ್ರೆಸ್ ಪಕ್ಷದ ಧ್ಯೇಯಗಳ ಮೇಲೆ ಪ್ರತಿಜ್ಞೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ ಗುಲ್ವಾಡಿ, ಹಿರಿಯರಾದ ಕೃಷ್ಣಪ್ಪ ಪೂಜಾರಿ, ಸಂಜೀವ ಪೂಜಾರಿ, ಹೂವಯ್ಯ ಶೇರ್ವೇಗಾರ್, ತಾಲೂಕು ಪಂಚಾಯತ್ ಸದಸ್ಯರಾದ ದಿನಕರ ಹೆರೂರು, ಪ್ರಶಾಂತ್ ಸುವರ್ಣ, ಸತೀಶ್ ಸಲ್ಯಾನ್, ಜಯಕರ ಆಚಾರ್ಯ, ಪ.ಸದಸ್ಯರಾದ ಗಣೇಶ್ ಡಿ. ಪೂಜಾರಿ, ಸಿರಿಲ್ ಅಲ್ಮೇಡಾ, ರಮೇಶ್ ಕರ್ಕೇರ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೇಮಾ ಲೂಯಿಸ್ ನಿರೂಪಿಸಿದರು


Spread the love