ಉಳ್ಳಾಲ ಹೊಯ್ಗೆ ನದಿ ತೀರದಲ್ಲಿ 33 ವರ್ಷ ವಯಸ್ಸಿನ ಯುವಕನ ಮೃತದೇಹ ಪತ್ತೆ

Spread the love

ಉಳ್ಳಾಲ ಹೊಯ್ಗೆ ನದಿ ತೀರದಲ್ಲಿ 33 ವರ್ಷ ವಯಸ್ಸಿನ ಯುವಕನ ಮೃತದೇಹ ಪತ್ತೆ

ಮಂಗಳೂರು: ಯುವಕನೋರ್ವನ ಮೃತದೇಹವೊಂದು ನೇತ್ರಾವತಿ ನದಿಯ ಉಳ್ಳಾಲ ಹೊಯ್ಗೆ ನದಿ ತೀರದಲ್ಲಿ ಮಂಗಳವಾರ ಸಂಜೆ ತೇಲಿ ಬಂದಿದೆ.

ಮೃತ ಯುವಕನನ್ನು ಆಧಾರದಲ್ಲಿ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಸಂಜೀವ ಆಚಾರ್ಯ ಎಂಬವರ ಪುತ್ರ ಚೇತನ್(33) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಚೇತನ್ ಮೃತದೇಹ ನೀರಿನಲ್ಲಿ ತೇಲಿ ಬಂದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹದ ಬಳಿಯಿದ್ದ ವೋಟರ್ ಐಡಿ ಆಧಾರದಲ್ಲಿ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಸಂಜೀವ ಆಚಾರ್ಯ ಎಂಬವರ ಪುತ್ರ ಚೇತನ್(33) ಮೃತಪಟ್ಟವರು ಎಂದು ಗುರುತು ಪತ್ತೆಹಚ್ಚಲಾಗಿದೆ.

ಎರಡು ದಿನಗಳ ಹಿಂದೆ ಮನೆಯಿಂದ ಚೇತನ್ ನಾಪತ್ತೆಯಾಗಿದ್ದು ಮಂಗಳವಾರ ಬೆಳಿಗ್ಗೆ ಸ್ಥಳೀಯ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು ಮಾನಸಿಕ ಖಿನ್ನತೆಯಿಂದ ಚೇತನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love