ಎಡಪದವು, ಬೋರುಗುಡ್ಡೆ ದನಕಳವು ಆರೋಪಿ ಬಂಧನ

Spread the love

ಎಡಪದವು, ಬೋರುಗುಡ್ಡೆ ದನಕಳವು ಆರೋಪಿ ಬಂಧನ

ಮಂಗಳೂರು: ಎಡಪದವು ಹಾಗೂ ಬೋರುಗುಡ್ಡೆಯಲ್ಲಿ ದನಕಳವು ಪ್ರಕರಣದ ಆರೋಪಿ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಮೊಹಮ್ಮದ್ ನಯೀಮ್ ಯಾನೆ ನಯೀಂ(19) ನನ್ನು ಬಜಪೆ ಪೋಲಿಸರು ಬಂಧಿಸಿ, ಕಳವು ಕೃತ್ಯಕ್ಕೆ ಬಳಸಿದ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ತೆಂಕ ಎಡಪದುವಿನ ಮನೆಯಲ್ಲಿ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನವನ್ನು ಮನೆಯವರನ್ನು ಬೆದರಿಸಿ ಜ.27ರಂದು ಮುಂಜಾನೆ ಕಳವು ಮಾಡಲಾಗಿತ್ತು. ಅಲ್ಲದೆ ಬೋರುಗುಡ್ಡೆ ಧ್ವಜಸ್ತಂಭದ ಬಳಿ ಮಲಗಿದ್ದ ದನವನ್ನು ಕದ್ದು ಕೆಂಪ ಸ್ವಿಫ್ಟ್ ಕಾರಿನಲ್ಲಿ ಸಾಗಿಸಿದ್ದ.

ಜುಲೈ 28ರಂದು ಈತನ್ನನ್ನು ಗಂಜಿಮಠದ ನಾರ್ಲಪದವು ಕ್ರಾಸ್ ಬಳಿಯಿಂದ ಪೋಲಿಸರು ಬಂಧಿಸಿದ್ದಾರೆ.

ಈತ ಮಚ್ಚೂರು, ನೀರುಡೆಯ ಮನೆಗಳಿಂದ ದನಕಳವು ಮಾಡಿ ತಲೆಮರೆಸಿಕೊಂಡಿದ್ದ, ಈತನ ವಿರುದ್ದ ಸುರತ್ಕಲ್ ಠಾಣೆಯಲ್ಲೂ ದನಕಳ್ಳತನ ಪ್ರಕರಣ ದಾಖಲಾಗಿದೆ.


Spread the love