ಎತ್ತಿನ ಹೊಳೆ ಯೋಜನೆ ಭ್ರಷ್ಟಾಚಾರ ; ಸಿಎಂ ರಾಜೀನಾಮೆಗೆ ಸಂಸದ ನಳಿನ್ ಆಗ್ರಹ

Spread the love

ಎತ್ತಿನ ಹೊಳೆ ಯೋಜನೆ ಭ್ರಷ್ಟಾಚಾರ ; ಸಿಎಂ ರಾಜೀನಾಮೆಗೆ ಸಂಸದ ನಳಿನ್ ಆಗ್ರಹ

ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಮೂಲಕ ಹಣದ ಹೊಳೆಯೇ ಹರಿಯುತ್ತಿರುವ ವಿಷಯವನ್ನು ಮಾಧ್ಯಮಗಳು ಬಹಿರಂಗಪಡಿಸುತ್ತಿವೆ. ಈ ಯೋಜನೆಯು ವ್ಯಾಪಕ ಭ್ರಷ್ಟಾಚಾರದ ಬಹುದೊಡ್ಡ ಹಗರಣವಾಗಿದೆ. ಯೋಜನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಭಾಗಿಯಾಗಿದ್ದು, ತಕ್ಷಣ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

image004nalin-kumar-kateel-press-20160413-004lin

ಈ ಯೋಜನೆಯಿಂದ ದಕ್ಷಿಣ ಕನ್ನಡಕ್ಕೆ ಅನ್ಯಾಯವಾಗುತ್ತದೆ. ಹಾಗೆಯೇ ಕೋಲಾರದವರಿಗೂ ನೀರು ಲಭಿಸುವುದಿಲ್ಲ ಎಂಬುವುದನ್ನು ನಾವು ನಿರಂತರವಾಗಿ ಹೇಳುತ್ತಾ ಬಂದಿದ್ದೇವೆ. ನಾನು ಎತ್ತಿನಹೊಳೆ ಯೋಜನೆಯ ವಿರುದ್ಧ ನಿರಂತರ ಹೋರಾಟ ನಡೆಸುತ್ತಾಬಂದರೂ, ರಾಜ್ಯ ಸರಕಾರ ಇದರ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಭ್ರಷ್ಟಾಚಾರಕ್ಕಾಗಿಯೇ ಈ ಯೋಜನೆಯನ್ನು ರಾಜ್ಯ ಸರಕಾರ ಪೆÇೀಷಿಸುತ್ತಿದ್ದು, ಕೋಲಾರ ಭಾಗದ ಜನರಿಗೂ ಯೋಜನೆಯಿಂದ ನೀರು ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಇಡೀ ಕರ್ನಾಟಕ ಜನ ಹೋರಾಟಕ್ಕೆ ಮುಂದಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love