ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ

Spread the love

 ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ

ಉಡುಪಿ: ನಾಡ್ಲಾಲು ಕಾರ್ಕಳ ತಾಲೂಕು ಸೋಮೇಶ್ವರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಇದೇ ಬರುವ ಶನಿವಾರ ತಾ- 14 ಎಪ್ರಿಲ್ 2018 ರಂದು ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಸಂಜೆ 6 ರಿಂದ ‘ಸಿತಾರ್ ವಾದನ’ ಮತ್ತು ‘ಸಂತವಾಣಿ ಸಂಗೀತ’ ಕಾರ್ಯಕ್ರಮ ನಡೆಯಲಿದೆ.

ಮಂಗಳೂರಿನ ಭರವಸೆಯ ಯುವ ಕಲಾವಿದ  ಅಂಕುಶ್ ಎನ್. ನಾಯಕ್ ಇವರಿಂದ ಸಿತಾರ್ ವಾದನ ಹಾಗೂ ಹುಬ್ಬಳ್ಳಿಯ ಪ್ರಖ್ಯಾತ ಗಾಯಕರಾದ ಪಂII ಜಯತೀರ್ಥ ಮೇವುಂಡಿ ಇವರಿಂದ ‘ಭಜನ್ ಸಂಧ್ಯಾ’ ಸಂತವಾಣಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆರ್ಬೆಟ್ಟು ಸುರೇಶ್ ಕಾಮತ್ ಅವರು ಪ್ರಾಯೋಜಕತ್ವ ವಹಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತಾಸಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love