ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್

Spread the love

ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್

ಉಳ್ಳಾಲ: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವತಿಯಿಂದ ಜ.10 ರಿಂದ 17 ರವರೆಗೆ ಉಳ್ಳಾಲ ದರ್ಗಾ ರೋಡ್‌ಬಳಿಯ ಝುಬೈರ್ ಉಸ್ತಾದ್ ನಗರದ ಮರ್ಹೂಂ ಹಿದಾಯತ್ ಸಭಾಂಗಣ ತಾಜುಲ್ ಉಲಮಾ ವೇದಿಕೆಯಲ್ಲಿ ಬೃಹತ್ ಬುರ್ದಾ ಮಜ್ಲಿಸ್, ಮದನಿ ಮಾಲೆ-ತಾಜುಲ್ ಉಲಮಾ ವೌಲಿದ್, ಮುಹಿಯದ್ದೀನ್ ಮಾಲೆ ಆಲಾಪನೆ ಹಾಗೂ ಮತ ಪ್ರಭಾಷಣ ದ.ಕ. ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯಿದ್ ಹಾಮಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ದುವಾಶೀರ್ವಚನದೊಂದಿಗೆ ಕಾರ್ಯಕ್ರಮ ನಡೆಯಿತು.

ವಾಮಂಜೂರು ಖತೀಬ್ ಬಿ.ಕೆ. ಅಬ್ದುಲ್ ಹಮೀದ್ ಫೈಝಿ, ಮಳ್‌ಹರ್ ದಅವಾ ಕಾಲೇಜಿನ ಪ್ರಾಂಶುಪಾಲರು ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ ಶಿರಿಯಾ, ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಅಧ್ಯಕ್ಷರು ಟಿ.ಎಂ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಎಸ್ಸೆಸ್ಸೆಫ್ ಚಿಕ್ಕಮಗಳುರು ಜಿಲ್ಲೆಯ ಉಪಾಧ್ಯಕ್ಷರಾದ ನೌಫಲ್ ಸಖಾಫಿ ಕಳಸ, ಚೆಂಬುಗುಡ್ಡೆ ಜುಮಾ ಮಸೀದಿ ಖತೀಬರಾದ ಕೆ.ವೈ.ಹಂಝ ಮದನಿ ಗುರುವಾಯನಕೆರೆ ಕ್ರಮವಾಗಿ ಜ.10 ರಿಂದ 16 ರವರೆಗೆ ಮುಖ್ಯ ಭಾಷಣಗೈದರು.

ಜ.11 ರಂದು ಅಲ್ ಹಾಫಿಳ್ ಸ್ವಾದಿಖ್ ಅಲಿ ಫಾಳಿಲಿ ಗೂಡಲ್ಲೂರು ತಂಡ ಇವರಿಂದ ಬೃಹತ್ ಬುರ್ದಾ ಮಜ್ಲಿಸ್ ಆಯೋಜಿಸಲಾಯಿತು. ಜ.15 ರಂದು ಯಾಕುಬ್ ಮದನಿ ಮತ್ತು ಜಾಬಿರ್ ಫಾಳಿಲಿ ಯವರಿಂದ ಮದನಿ ಮಾಲೆ ಮತ್ತು ದಾರುಲ್ ಅಶ್ಹರಿಯ ಪ್ರಾಂಶುಪಾಲರ ಸುಪುತ್ರ ಅಶ್ಹದ್ ಸಖಾಫಿ ತಂಡದಿಂದ ತಾಜುಲ್ ಉಲಮಾ ವೌಲಿದ್ ಜ. 17ರಂದು ನಡೆದ ಅನ್ವರ್ ಅಲಿ ಶಿರಿಯಾ ಇವರಿಂದ ಮುಹ್ಯಿದ್ದೀನ್ ಮಾಲೆ ಆಲಾಪನೆ ನಡೆಯಿತು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ, ಮಳ್‌ಹರ್ ದುವಾ ನೆರವೇರಿಸಿದರು. ಉಳ್ಳಾಲ ಡಿವಿಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುನೀರ್ ಸಖಾಫಿ ಯವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್, ಜಲಾಲುದ್ದೀನ್ ತಂಙಳ್ ಅಳೇಕಲ, ಅಬ್ದುಲ್ ಕರೀಂ ಹಾಜಿ, ಉಸ್ಮಾನ್ ಸಖಾಫಿ ಪೊಳಲಿ, ನವಾಝ್ ಸಖಾಫಿ, ಬಶೀರ್ ಸಖಾಫಿ ಮೇಲಂಗಡಿ, ಹನೀಫ್ ಹಾಜಿ, ತ್ವಾಹಿರ್ ಹಾಜಿ, ಇಸ್ಮಾಯಿಲ್ ಹಾಜಿ, ಇಶಾಕ್ ರಹ್ಮಾನಿಯ, ಯೂಸುಫ್ ಹಾಜಿ ಮಿಲ್ಲತ್, ಅಲ್ತಾಫ್ ಕುಂಪಲ, ಮುಸ್ತಫ ಮಾಸ್ಟರ್, ಫರೂಖ್ ಹಿಬಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಎಸ್ಸೆಸ್ಸೆಫ್ ಮೇಲಂಗಡಿ ಅಧ್ಯಕ್ಷ ಜಮಾಲ್ ಮುಸ್ಲಿಯಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತಾಜುದ್ದೀನ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕನ್ನು ವಿತರಿಸಲಾಯಿತು.


Spread the love