ಎಸ್.ಕೆ.ಪಿ.ಎ ದಕ್ಷಿಣ ಕನ್ನಡ – ಉಡುಪಿ ವತಿಯಿಂದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

Spread the love

ಎಸ್.ಕೆ.ಪಿ.ಎ ದಕ್ಷಿಣ ಕನ್ನಡ – ಉಡುಪಿ ವತಿಯಿಂದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ದಕ್ಷಿಣ ಕನ್ನಡ -ಉಡುಪಿ ಈ ಸಂಘಟನೆಯಲ್ಲಿ ಅನುಭವಿಗಳು, ಹಿರಿಯ, ಕಿರಿಯ ಉತ್ಸಾಹಿ ಛಾಯಾಗ್ರಾಹಕರನ್ನು ಹೊಂದಿರುವ, ಕಳೆದ 28 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಮೂರು ಸಾವಿರಕ್ಕೂ ಅಧಿಕ ಕ್ರಿಯಾಶೀಲ ಸದಸ್ಯ ಬಲವಿರುವ ಐಕ್ಯಮತದ ಸಂಘಟನೆ. ವೃತ್ತಿ ಜೀವನ ದೊಂದಿಗೆ ಜನಪರ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಕಳಕಳಿಯೊಂದಿಗೆ ಸದಸ್ಯರೆಲ್ಲರ ಸಹಕಾರದಿಂದ ಮಂಗಳೂರಿನಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಛಾಯಾ ಗ್ರಾಹಕ ಸಂಘಟನೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘ ನಡೆಸುತ್ತಿರುವ ಅಪರೂಪದ ಸಂಘಟನೆ.

ವೃತ್ತಿ ಜೀವನದೊಂದಿಗೆ ಜನಪರ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಅವಳಿ ಜಿಲ್ಲೆಯಲ್ಲಿ ವೃತ್ತಿ ಪರ ಛಾಯಾಗ್ರಹಣದಲ್ಲಿ ಇಂದು ಸಾವಿರಾರು ಜನರು ತಮ್ಮ ಬದುಕನ್ನು ಕಂಡು ಕೊಳ್ಳುತ್ತಿದ್ದು ಅವರ ಕುಟುಂಬಕ್ಕೂ ಭದ್ರತೆ ನೀಡುವ ದೃಷ್ಟಿಯಿಂದ ಅವರ ಸಂಕಷ್ಟ ಸಮಯದಲ್ಲಿ ಸಹಾಯ ಹಸ್ತ ನೀಡುವ ಸಲುವಾಗಿ ” ಛಾಯಾಸುರಕ್ಷಾ” ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ನಿಧಿ ಸಂಗ್ರಹಕ್ಕಾಗಿ ನಮ್ಮೀ ಸಂಸ್ಥೆಯ ಆಶ್ರಯದಲ್ಲಿ ಪ್ರಥಮ ಬಾರಿಗೆ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದೆ.

ಉಡುಪಿ ಬೀಡಿನ ಗುಡ್ಡೆ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 09 ಮತ್ತು 10ರಂದು ಈ ಪಂದ್ಯಾಟವನ್ನು ಆಯೋಜಿಸಿರುತ್ತೇವೆ. ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನ 1,11,111-00 ಹಾಗು ದ್ವಿತೀಯ ಬಹುಮಾನ 55,555-00 ಹಾಗು ವಯಕ್ತಿಕ ಬಹುಮಾನಗಳು ನೀಡಲಾಗುವುದು

ಮಾರ್ಚ್ 9ರಂದು ಬೆಳಿಗ್ಗೆ ಗಂಟೆ 8.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾರ್ಚ್ 10ರಂದು ಸಂಜೆ ಗಂಟೆ 4.00 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಎಸ್.ಕೆ.ಪಿ.ಎ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲಿಸ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.


Spread the love