ಎ.ಎನ್.ಎಫ್ ಕಾರ್ಕಳ ನೂತನ ಎಸ್ಪಿಯಾಗಿ ಇಡಾ ಮಾರ್ಟಿನ್ ನೇಮಕ

Spread the love

ಎ.ಎನ್.ಎಫ್ ಕಾರ್ಕಳ ನೂತನ ಎಸ್ಪಿಯಾಗಿ ಇಡಾ ಮಾರ್ಟಿನ್ ನೇಮಕ

ಉಡುಪಿ: ಕಾರ್ಕಳ ಅ್ಯಂಟಿ ನಕ್ಸಲ್ ಪಡೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಡಾ ಮಾರ್ಟಿನ್ ಮಾರ್ಬನಿಯಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

17 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲೆ ಕಾರ್ಕಳದ ಎ ಎನ್ ಎಫ್ ಎಸ್ಪಿಯಾಗಿ ಕಲ್ಬುರ್ಗಿ ಎಸ್ಪಿಯಾಗಿದ್ದ ಇಡಾ ಮಾರ್ಟಿನ್ ಮಾರ್ಬನಿಯಂಗ್ ಅವರನ್ನು ನೇಮಿಸಿದೆ

2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅವರು ಕಲಬುರಗಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹಿಂದೆ ಸಿಐಡಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1300 ಪುಟಗಳ ದೋಷಾರೋಪ ಪಟ್ಟಿಯನ್ನು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕಾರ್ಕಳ ಕೇಂದ್ರ ಘಟಕ ಹೊಂದಿರುವ ನಕ್ಸಲ್ ನಿಗ್ರಹ ದಳದಲ್ಲಿ 4 ತಿಂಗಳಿನಿಂದ ಎಎನ್ಎಫ್ ಘಟಕದ ವರಿಷ್ಠಾಧಿಕಾರಿ ಹುದ್ದೆ ಖಾಲಿ ಇದ್ದು, ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪ್ರಭಾರ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. .


Spread the love