ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ  ಗಣೇಶೋತ್ಸವ

Spread the love

ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ  ಗಣೇಶೋತ್ಸವ

ಮಂಗಳೂರು .ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ೨೪ನೇ ವರ್ಷ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೆ. ೨ರಿಂದ ೬ರ ವರೆಗೆ ನಡೆದ ಗಣೇಶೋತ್ಸವದ ಬಳಿಕ ಕೊಲ್ಲೂರು ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ ಅವರ ನೇತೃತದಲ್ಲಿ ವಿಸರ್ಜನಾ ಮಹೋತ್ಸವ ನಡೆಯಿತು.

ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಷನ್ ಟ್ರಸ್ಟ್ (ಎಲ್‌ಎಂಇಟಿ) ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ಎಲ್‌ಎಂಇಟಿ ನಿರ್ದೇಶಕಿ ಅಶ್ರಿತಾ ಪಿ. ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ಪೊಲೀಸ್ ನಿರೀಕ್ಷಕ ಶಾಂತಾರಾಮ, ರಾಜೀವಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಶಿವಚರಣ ಶೆಟ್ಟಿ, ಎಲ್‌ಎಂಇಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಅಭಿಲಾಷ್ ಪಿ.ವಿ., ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಸಂಜಯ್ ಎಪೆನ್ ಸ್ಯಾಮುವೆಲ್, ಸಮಿತಿ ಸದಸ್ಯರಾದ ಡಾ. ಹರೀಶ್ ಎಸ್. ಕೃಷ್ಣ, ಡಾ. ಅಜಯ್ ಘೋಷ್, ಡಾ. ಪಿಎಸ್‌ಬಿ ರೋಶನ್ ಭಾಗವಹಿಸಿದ್ದರು. ಬಳಿಕ ಶೋಭಾಯಾತ್ರೆಯು ವಿಜ್ರಂಭಣೆಯಿಂದ ನಡೆಯಿತು. ಕುಡ್ತೇರಿ ಮಹಾಮಾಯಿ ದೇವಸ್ಥಾನದಲ್ಲಿನ ವಿಸರ್ಜನೆ ಮಾಡಲಾಯಿತು.


Spread the love