ಏಪ್ರಿಲ್ 14: ಮಿಥುನ್ ರೈ ಪರ ಪ್ರಚಾರಕ್ಕಾಗಿ ಖ್ಯಾತ ಹಿಂದಿ ಚಿತ್ರ ನಟ ಶತ್ರುಘ್ನ ಸಿನ್ಹಾ

Spread the love

ಏಪ್ರಿಲ್ 14: ಮಿಥುನ್ ರೈ ಪರ ಪ್ರಚಾರಕ್ಕಾಗಿ ಖ್ಯಾತ ಹಿಂದಿ ಚಿತ್ರ ನಟ ಶತ್ರುಘ್ನ ಸಿನ್ಹಾ

ಮಂಗಳೂರು: ಏಪ್ರಿಲ್ 14ರಂದು ಭಾನುವಾರ ಸಂಜೆ 6.00 ಗಂಟೆಗೆ ಸರಿಯಾಗಿ ಕದ್ರಿ ಮೈದಾನದಲ್ಲಿ ಖ್ಯಾತ ಚಲನ ಚಿತ್ರ ನಟ, ಮಾಜಿ ಕೇಂದ್ರ ಸಚಿವ, ಲೋಕಸಭಾ ಸದಸ್ಯರಾದ ಶತ್ರುಘ್ನ ಸಿನ್ಹಾ ರವರು ಸಾರ್ವಜನಿಕರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿರುವರು.

ಈ ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ಮಿಥುನ್ ರೈ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ಶಾಸಕ ಜೆ.ಆರ್. ಲೋಬೊ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.


Spread the love