ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ

Spread the love

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ

ಉಡುಪಿ: ಬಾಲ್ಯದಿಂದಲೇ ಕಲೆ ನಟನೆಯತ್ತ ಆಸಕ್ತಿ ವಹಿಸಿಕೊಂಡು ಹುಲಿವೇಷ, ಯಕ್ಷಗಾನ, ನಾಟಕ ಸಿನಿಮಾದಲ್ಲಿ ಅಭಿನಯಸಿ ಇದೀಗ ನಾಯಕ ನಟನಾಗಿಯೂ ಬೆಳೆಯುತ್ತಿರುವ ಉಡುಪಿಯ ಯುವನಟ ಅಬ್ದುಲ್ ರೆಹಮಾನ್ ಅವರನ್ನು ಜೈ ಕರ್ನಾಟಕ ಪಡುಬಿದ್ರೆ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಿಜೆಪಿ ಕಾಪು ವಿಧಾನಸಬಾ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜೈ ಕರ್ನಾಟಕ ಪಡುಬಿದ್ರೆ ಘಟಕ ಶಬ್ಬೀರ್ ಹುಸೈನ್ ಪಡುಬಿದ್ರೆ ಗ್ರಾಮಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಪಡುಬಿದ್ರೆ ಇದರ ಪ್ರಧಾನ ಸಂಚಾಲಕರಾದ ಲೊಕೇಶ್ ಕಂಚಿನಡ್ಕ, ಬಜರಂಗ ದಳ ಕಾಪು ಪ್ರಖಂಡ ಸಂಚಾಲಕರು ರಾಜೇಶ್ ಕೋಟ್ಯಾನ್, ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಆಸೀಫ್ ಉಚ್ಚಿಲ, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್, ಪತ್ರಕರ್ತರಾದ ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.


Spread the love