ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮಾತಾನಾಡುವಷ್ಟು ಪ್ರಬುದ್ಧತೆ ನಳಿನ್ ಕುಮಾರಿಗಿಲ್ಲ- ಮಿಥುನ್ ರೈ

Spread the love

ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮಾತಾನಾಡುವಷ್ಟು ಪ್ರಬುದ್ಧತೆ ನಳಿನ್ ಕುಮಾರಿಗಿಲ್ಲ- ಮಿಥುನ್ ರೈ

ಮಂಗಳೂರು: ವೇದಿಕೆ ಸಿಕ್ಕಿದರೆ ಹಾಸ್ಯಾಸ್ಪದವಾಗಿ ಹೇಳಿಕೆ ನೀಡುವ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮಾತನಾಡಲು ಯಾವ ನೈತಿಕ ಹಕ್ಕು ಇಲ್ಲ, ಅವರು ಸುಳ್ಳುಗಳ ಮೇಲೆ ರಾಜಕೀಯ ಮಾಡುವವರು ಎಂದು ರಾಜ್ಯದ ಜನರಿಗೆ ತಿಳಿದಿದೆ, ಅದುವಲ್ಲದೆ ಬಿಜೆಪಿಯ ಮುಖ್ಯಮಂತ್ರಿ ಸಹಿತ ಸಚಿವರು ಲಂಚ, ಅಕ್ರಮ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋದದ್ದು ಮರೆತು ಹೋಯಿತಾ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ   ಮಿಥುನ್ ರೈ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ರವರು ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ರಾಜಕಾರಣ ಮೂಲಕ ಬೆಳೆದು ಬಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರು, ಅವರ ನೇತ್ರತ್ವದಲ್ಲಿಯೇ ಎರಡು ಕ್ಷೇತ್ರಗಳ ಉಪಚುನಾವಣೆ ಗೆಲ್ಲುತ್ತೆ ಆದರೆ ನಳಿನ್ ಕುಮಾರ್ ಇನ್ಯಾರದೋ ಹೇಸರೇಳಿ ಮುನ್ನಲೆಗೆ ಬಂದವರು ಅದುದರಿಂದ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ಕೊಡುವಾಗ ಗೌರವದಿಂದ ಕೊಡಲಿ ಎಂದು ಎಚ್ಚರಿಕೆಯನ್ನು ನೀಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love