ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ – ಜೆ ಕೃಷ್ಣ ಪಾಲೆಮಾರ್

Spread the love

ಪತ್ರಿಕಾ ಪ್ರಕಟಣೆಗಾಗಿ ದಿನಾಂಕ:11.11.2016

ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ – ಜೆ.ಕೃಷ್ಣ ಪಾಲೆಮಾರ್

ಮಂಗಳೂರು: ಸಕರ್ಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿಯಲ್ಲಿ ಸಚಿವ ತನ್ವೀರ್ ಸೇಠ್ ಮೊಬೈಲ್ನಲ್ಲಿ ಅರೆನಗ್ನ ಯುವತಿಯ ಚಿತ್ರ ವೀಕ್ಷಿಸಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇಂತಹ ಸಚಿವರಿಗೆ ತನ್ನ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಈಗ ಕಾಂಗ್ರೆಸ್ ನಾಯಕರು ಸಚಿವರ ರಾಜೀನಾಮೆಗೆ ಒತ್ತಾಯಿಸಲಿ ಎಂದು ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಆಗ್ರಹಿಸಿದ್ದಾರೆ.

ಈ ಹಿಂದೆ ಸದನದಲ್ಲಿ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ನೋಡಿದ ಪ್ರಕರಣಕ್ಕೂ ನನಗೂ ಏನೂ ಸಂಬಂಧ ಇರಲಿಲ್ಲ. ಯಾವುದೇ ಮಾಧ್ಯಮದಲ್ಲಿ ನಾನು ಅಂತಹ ಕೃತ್ಯ ಮಾಡಿರುವ ದೃಶ್ಯ ಪ್ರಸಾರವಾಗಿರಲಿಲ್ಲ. ಆದಾಗ್ಯೂ ನನ್ನ ಹೆಸರು ಉಲ್ಲೇಖವಾಯಿತು ಎನ್ನುವ ಕಾರಣಕ್ಕಾಗಿ ಪಕ್ಷಕ್ಕೆ ಮುಜುಗರವಾಗಬಾರದೆಂದು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಮಾಡಿದ್ದೆ. ವಿನಾ ಕಾರಣ ಮಾನಹಾನಿ ವರದಿ ಪ್ರಸಾರ ಮಾಡಿದ ಕೆಲವು ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಆದರೆ ಆ ಬಳಿಕವೂ ಕಾಂಗ್ರೆಸ್ ನಾಯಕರು ವೇದಿಕೆಗಳಲ್ಲಿ ನನ್ನ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾರೆ. ಈಗ ಅದೇ ನಾಯಕರು ಮೌನವಾಗಿದ್ದಾರೆ. ತಮ್ಮ ಪಕ್ಷದ ಸಚಿವ ಮೊಬೈಲ್ನಲ್ಲಿ ಅರೆನಗ್ನ ಯುವತಿಯ ಚಿತ್ರ ವೀಕ್ಷಿಸಿದ್ದು ಮಾಧ್ಯಮದಲ್ಲಿ ದಾಖಲೆ ಸಹಿತ ಪ್ರಸಾರವಾಗುತ್ತಿದ್ದರೂ ಸಮಥರ್ಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇದ್ದರೆ ಈಗ ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love