ಕಾರ್ಕಳ ನಗರ ಠಾಣೆ ಕ್ರೈಮ್ ಪಿ.ಎಸ್.ಐ. ಲಕ್ಷ್ಮಣ್ ನಿಧನ

Spread the love

ಕಾರ್ಕಳ ನಗರ ಠಾಣೆ ಕ್ರೈಮ್ ಪಿ.ಎಸ್.ಐ. ಲಕ್ಷ್ಮಣ್ ನಿಧನ

ಕಾರ್ಕಳ: ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ವಿಭಾಗದ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಣ್ ಅವರು ಬುಧವಾರ ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕಳೆದ ಒಂದು ತಿಂಗಳಿನಿಂದ ಲಿವರ್ ಕ್ಯಾನ್ಸರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಮೃತ ಲಕ್ಷ್ಮಣ್ ಅವರು ಇಲಾಖೆಗೆ ಪೊಲೀಸ್ ಕಾನ್ಸ್ ಟೇಬಲ್ ಆಗಿ ಸೇವೆಗೆ ಸೇರಿ ಬಳಿಕ ಎಎಸ್ ಐ, ಪಿಎಸ್ ಐ ಆಗಿ ಭಡ್ತಿ ಹೊಂದಿದ್ದು ಕಾಪು, ಉಡುಪಿ ನಗರ, ಕಾರ್ಕಳ ನಗರ ಠಾಣೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

ಮೃತರು ಪತ್ನಿ ನಳಿನಿ, ಪುತ್ರ ಮನೀಶ್ ಅವರನ್ನು ಅಗಲಿದ್ದಾರೆ.

ಮೂಲತಃ ಪುತ್ತೂರಿನವರಾದ ಲಕ್ಷ್ಮಣ್ ಅವರ ಅಂತ್ಯಕ್ರಿಯೆಯು ಹುಟ್ಟೂರಿನಲ್ಲಿ ಗುರುವಾರ ಜರುಗಲಿದೆ.


Spread the love