ಕುಂಟಾಡಿ ರಕ್ತೇಶ್ವರಿ ದೇವಸ್ಥಾನ ; 6 ಲಕ್ಷ ಮೌಲ್ಯದ ಬೆಳ್ಳಿಯಾಭರಣ ಲೂಟಿ

Spread the love

ಕಾರ್ಕಳ : ಕಲ್ಯಾ ಗ್ರಾಮದ ಕುಂಟಾಡಿ ರಕ್ತೇಶ್ವರಿ ದೇವಸ್ಥಾನಕ್ಕೆ ಹಿಂಬಾಗಿಲಿನಿಂದ ಒಳನುಗ್ಗಿದ ಕಳ್ಳರು 6 ಲಕ್ಷ ರೂ. ಮೌಲ್ಯದ ಕಂಚು ಮತ್ತು ಬೆಳ್ಳಿಯ ಆಭರಣವನ್ನು ಕದ್ದೊಯ್ದಿದ್ದಾರೆ. ಶನಿವಾರ ರಾತ್ರಿ ಈ ಕಳವು ನಡೆದಿದ್ದು, ರವಿವಾರ ಮುಂಜಾನೆ ದೇವಸ್ಥಾನಕ್ಕೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
4 ಕಂಚಿನ ವಿಗ್ರಹಗಳು, ಗರ್ಭಗುಡಿಧಿ ಗೆ ಅಳವಡಿಸಿದ ಬೆಳ್ಳಿಯ ತಗಡು ಕಳವಾಗಿದೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ದೇವಳದಲ್ಲಿ ದೀಪದೆಣ್ಣೆ ಚೆಲ್ಲಿದ ಪರಿಣಾಮ ಯಾವುದೇ ಸುಳಿವು ಲಭ್ಯವಾಗಿಲ್ಲ. ದೇವರಹುಂಡಿಯಲ್ಲಿ ಸ್ವಲ್ಪ ಹಣವಿತ್ತು. ಅದನ್ನು ಕಳ್ಳರು ಬಿಟ್ಟು ಪರಾರಿಯಾಗಿದ್ದಾರೆ.


Spread the love