ಕುಂದಾಪುರ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ

Spread the love

ಕುಂದಾಪುರ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ಅಪ್ರಾಪ್ತ ಬಾಲಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದಲ್ಲಿ ಸಂಭವಿಸಿದೆ.

ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಭಾಸ್ಕರ ಪೂಜಾರಿ ಇವರ ಹೆಂಡತಿ ಅಕ್ಕನ ಮಗ 14 ವರ್ಷದ ಸಂತೋಷ್ (ಹೆಸರು ಬದಲಿಸಿದೆ) ತಂದೆ ತಾಯಿ ಈ ಹಿಂದೆ ತೀರಿಕೊಂಡಿದ್ದು, ಸಾಯಿ ಶರಣು ಅವರನ್ನು ಭಾಸ್ಕರ ಪೂಜಾರಿ ಸಾಕಿಕೊಂಡಿದ್ದು ಆತನು 8 ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು ಕಲಿಕೆಯಲ್ಲಿ ಹಿಂದುಳಿದು ಸ್ಪಲ್ಪ ಹಠವಾದಿಯಾಗಿರುತ್ತಾನೆ.

ಮಾರ್ಚ್ 17ರಂದು ಭಾಸ್ಕರ ಪೂಜಾರಿ ಅವರ ಪತ್ನಿ ಶಂಕರನಾರಾಯಣ ಹೈಸ್ಕೂಲಿಗೆ ಬೆಳಿಗ್ಗೆ 8:30 ಗಂಟೆಗೆ ಮನೆಯಿಂದ ಹೊರಡುವಾಗ ಬಾಲಕ ಮನೆಯಲ್ಲಿಯೇ ಓದಿಕೊಂಡಿದ್ದನು. ನಂತರ ನೆರೆಕೆರೆಯ ವಿದ್ಯಾಧರರು ಭಾಸ್ಕರ ಪೂಜಾರಿಯರಿಗೆ ಪೋನ್ ಮಾಡಿ ಬೇಗನೆ ಬರುವಂತೆ ತಿಳಿಸಿದ ಮೇರೆಗೆ ಅಲ್ಲಿಂದ ಹೊರಟು ಮನೆಗೆ ಬಂದು ನೋಡಲಾಗಿ ಸಾಯಿ ಶರಣು ಮನೆಯ ಹೊರಗಿನ ಬಚ್ಚಲು ಮನೆಯ ಮೇಲ್ಬಾಗದ ಜಂತಿಗೆ ಟವಲನ್ನು ಬಿಗಿದು, ಮತ್ತೊಂದು ತುದಿಗೆ ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿದ್ದನ್ನು ಕಂಡು ಬದುಕಿರಬಹುದೆಂದು ತಿಳಿದು ಕುತ್ತಿಗೆಯ ಗಂಟನ್ನು ಬಿಡಿಸಿ ಚಿಕಿತ್ಸೆಗಾಗಿ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಚಿಕಿತ್ಸೆ ನೀಡುತ್ತಿರುವಾಗಲೇ ಸಾಯಿ ಶರಣು 10:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love